Tag Archives: ಅಜಯ್ ಪೈರೋ

ಸನಿಹವಾದೆ ಸಾವಿನತ್ತ

ನೀ ಯಾಕಾದರೂ ನನ್ನ ಪ್ರೀತಿಸಿದೆ ಎಂಬ ಪ್ರಶ್ನೆಗೆ ಉತ್ತರವ ಹುಡುಕುತ,
ನಾ ನಡೆದೇ ಕಾಡಿನತ್ತ ,
ನೀ ನನ್ ಬಿಟ್ ಹೋಗಲು ಕಾರಣವ ಚಿಂತಿಸುತ,
ಸನಿಹವಾದೆ ಸಾವಿನತ್ತ. . .

ನಿನ್ನೆಲ್ಲ ಆಸೆಗಳನು ಈಡೆರಿಸಿದ್ದಕ್ಕ ?
ಬೇರ್ಯಾರಿಗೂ ನೀಡದ ಪ್ರೇಮವನ್ನು ನಿನಗೆ ಮಾತ್ರ ನೀಡಿದ್ದಕ್ಕ ?
ಎದೆಯ ಗುಡಿಯಲಿ ದೇವತೆಯಾ ಸ್ತಾನ ನೀಡಿದ್ದಕ್ಕ ?
ನನ್ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದಕ್ಕ ?
ಕೊನೆಯುಸಿರು ಇರೋವರೆಗೂ ನಿನ್ನ ಕಾಯುವೆ , ಪೂಜಿಸುವೆ , ಪ್ರೆಮಿಸುವೆ ಎಂದು ಭಾಷೆ ನೀಡಿದ್ದಕ್ಕ ?

ನೀ ಒಲ್ಲದ ಕಾರಣವ ಹೇಳಿ ದೂರಾಗಿದ್ದು ನನ್ನಿಂದ
ಬಯಸಿದ್ದಾದರು ಏನು ನಾ ನಿನ್ನಿಂದ ???

ಈಗಲೂ ಕಾಡುತಿದೆ ನಿನ್ ಅಂದ,
ನೀಡಿದೆ ಹೃದಯವ ಒಲವಿಂದ,
ಮೊಹಿಸಿದೆ ನಿನ್ನ ಚೆಲುವಿಂದ ,
ಹೀಗೆ ಬಿಟ್ತೋದರೆ ನನ್ನ ಏನು ಚಂದ ?

ರಕ್ತ ಎಪ್ಪು ಗಟ್ತಿದೆ ಹೃದಯದಿ ನೋವಿಂದ,
ಕಣ್ಣೀರು ಬಾರದೆ ಕಣ್ಣಿಂದ ,
ದೂರಗುತ್ತಿದ್ದೇನೆ ಈ ಪ್ರಪಂಚದಿಂದ ,
ಮಿಕ್ಕೆಲ್ಲ ಹುಡುಗಿಯರು ಕಲಿಯಲಿ ಪಾಠ ನನ್ನಿಂದ,
ಹುಡುಗರೇ ಎಚ್ಚರ ವಾಗಿರಿ ನನಗಾದ ಮೋಸದಿಂದ . . . .

ನೀತಿ ಪಾಠ ಏನೆಂದರೆ ಈ ಕವನದಿಂದ,
ಎಷ್ಟೇ ಮೋಸ ಹೋದರೂನು – ಶುರು ಮಾಡಿ ಪ್ರೀತಿಯನು ಮೊದಲಿನಿಂದ ,
ಬಯಸದಿರಿ ಏನನ್ನು ನಿಮ್ಮಾಕೆಯಿಂದ ,
ಇಂದು , ಮುಂದು , ಎಂದೆಂದೂ ಪ್ರೀತಿಸ್ತಾನೆ ಇರಿ ಎದೆಯಲ್ಲಿರೋ ಪುಟ್ಟ ಹೃದಯದಿಂದ . . . .
Ajay Pyro

ವಿಷಯ ನಮ್ದು ಕವನ ನಿಮ್ದು – ಅಜಯ್ (ಪುಟ1)

ಚಿತ್ರ ನೋಡಿ ಕವನ ಬರೆಯಿರಿ – 14

ನನ್ನ ಮನೆಯಲ್ಲೀಗ
ಬಂದು ಬಿಟ್ಟಿದೆ
ಕಣ್ಣೀರಿನ ಪ್ರವಾಹ
ಕಾರಣ…
ನೆಚ್ಚಿನ ಧಾರಾವಾಹಿಯಲಿ
ಸಾವಿಗೀಡಾದ ನಾಯಕಿಯ
ಬಗ್ಗೆ ನನ್ನವಳಿಗಿರೋ ವ್ಯಾಮೋಹ

Guruprasad Acharya
==================================
ಮನೆಯೊಳು ನುಗ್ಗಿ ನೀರು
ಮನದೊಳು ಚಿಂತೆ ನೂರು
ಹವಾಮಾನ ಸುದ್ದಿ ಜೋರು
ವಾತಾವರಣ ಏರು ಪೆರು .. !!

ಪರಿಹಾರ ಕೊಡುವುದು ಯಾರು
ಅರ್ಧ ಪಾಲು ಬಯಸುವವರು
ಹಿಂದಕ್ಕೊಮ್ಮೆ ಮುಂದಕ್ಕೊಮ್ಮೆ
ತೂಗುಯ್ಯಾಲೆ ಈ ಜೀವನ

Prashanth P Khatavakar
==================================
ಆಕಾಶವು ಬೀಳಲಿ ಮೇಲೆ…
ಭೂಮಿಯೆ ಬಾಯ್ ಬಿಡಲೇ ಇಲ್ಲೇ.
ನಾವೆಂದು ಏಳೆವು ಇಲ್ಲಿಂದ..!

ನದಿ-ಹೊಳೆಯೇ ಹರಿಯಲಿ ಇಲ್ಲಿ..
ಬೆಂಕಿಯೆ ಹತ್ತುರಿಯಲಿ ಇಂದಿಲ್ಲಿ.
ನಮಗೇನು ಕಾಣಿಸದು…!

ಎಂಥ ಸೆಳೆತ ಈ ಟಿ.ವಿ.ಯದು
ನಮಗೋ.. ನಿಮಗೋ.. ಅವರಿಗೋ.!
ಇದು ವಿಡಂಬನೆಯೋ..ವಿಪರ್ಯಾಸವೋ ಆ ದೇವನೆ ಬಲ್ಲ

Bhagirathi Chandrashekar
==================================
ಎಲ್ಲರ ಮನೆಯಲ್ಲೂ T.V.ಯೊಂದು ಕುಳಿತಿದೆ ಠೀವಿಯಲಿ
ಹಿಂದೆ ಸಿರಿವಂತರ ಕಿರೀಟಕ್ಕೆ ಗರಿಯಾಗಿತ್ತು..
ಈಗ ಎಲ್ಲರ ಮನೆಯ ಊಟದ ಉಪ್ಪಿನಕಾಯಿಯಾಗಿದೆ.

ಕೆಲವರ ಮಾಹಿತಿ ಸಂಗ್ರಹಣೆಯ ಕೇಂದ್ರಬಿಂದುವಾದರೆ..
ಮತ್ತೆ ಕೆಲವರಿಗೆ ಒಡನಾಡಿ..ಸಂಗಾತಿ.
ಮನೆ ಹತ್ತಿ ಉರಿದರೂ..ಕಳ್ಳಕೊಳ್ಳೆಹೊಡೆದರೂ
ಮೂರ್ಖಪೆಟ್ಟಿಗೆಯ ಮುಂದೆ ಕುಳಿತವರೆಷ್ಟೋ ಮೂರ್ಖಮಂದಿ

ಪ್ರಪಂಚದೆಲ್ಲಾ ಆಗು-ಹೋಗುಗಳ ಕ್ಷಣಮಾತ್ರದಿ ಭಿತ್ತರಿಸುವ
ಈ ಮಾಂತ್ರಿಕ ತಾಂತ್ರಿಕತೆಯ ಉತ್ತುಂಗವಲ್ಲವೇ..?
ಇನ್ನೊಬ್ಬರ ಭಾವನೆಗಳ ಬಂಡವಾಳಮಾಡಿಕೊಂಡವರ
ಪಾತ್ರದಲೇ ತಮ್ಮನ್ನಿರಿಸಿ ಅತ್ತಾಗ ಅತ್ತು, ನಕ್ಕಾಗ ನಕ್ಕು ಲೀನವಾದವರೆಷ್ಟೋ..?

ಇತಿ-ಮಿತಿಗಳ ಮತಿ ಮುಷ್ಠಿಯೊಳಿದ್ದರೆ
ಹವ್ಯಾಸ ಚಟವಾಗದಿದ್ದರೆ..ಅಮೃತ-ಅಮೃತವೇ..ವಿಷ-ವಿಷವೇ..
ಮಿತಿ ಮೀರಿದರೆ..ಅಮೃತವೂ-ವಿಷವೇ…!

Bhagirathi Chandrashekar
==================================
ನೀರನ್ನ ತಲ್ಲಿದರಾಯ್ತು ಹೊರಗೆ ನಂತರ
ಟಿವಿಯಂತೂ ಬೇಕೇಬೇಕು ನಿರಂತರ
ನೀರಿಗೇನು ಎಲ್ಲೂ ಹೋಗಲ್ಲ
ದಾರವಾಹಿಯಾದರೆ ಮತ್ತೆ ಸಿಗೊಲ್ಲ
ಮೊಣಕಾಲವರೆಗೆ ನೀರಾದರೇನಂತೆ
ನೋಡಿಕೊಳ್ಳಬೇಕು ಟಿವಿಗೆ ನೀರು ತಾಕದಂತೆ

Mamatha Keelar
==================================
ಹೆಂಡತಿ ಮಕ್ಕಳು ಕಣ್ ಬಿಟ್ಟು ,

ನೋಡುತಿರುವರು ಮೂರ್ಖರ ಪೆತ್ತಿಗೆಯನು ದಿಕ್ಕೆಟ್ಟು ,

ಹಿಡಿದು ಕೊಂದು ಕೈಯಲಿ ಒಂದು ಬೋರ್ಡ್ “ಡಿಸ್ಟರ್ಬ್ ಮಾಡ್ಬೇಡಿ ದಯವಿಟ್ಟು ”…

ಸಹಿಸಲಾರದೆ ಯಜಮಾನನು ಕಂಗೆಟ್ಟು ,

ಅತ್ತ ಕಡೆ ನಿಂತ್ ಕೊಂಡಿದ್ದಾರೆ ತಲೆ ಕೆಟ್ಟು ,

ಇತ್ತ ಕಡೆ ಮನೆ ಮಂದಿಯೆಲ್ಲ ನೋಡುತ ಧಾರಾವಾಹಿಯ ಒಂದು ಸಂನಿವೆಶವನು ಮೂಗಿನ ಮೇಲೆ ಬೆರಳಿಟ್ಟು ,

ಚಪ್ಪಿರುಸುತಿರುವರು – ಇರಬಾರದಿತ್ತೆ ತಿನ್ನೋಕೆ ಚಕ್ಲಿ ನಿಪ್ಪಟ್ಟು …

ಮೆಲ್ಲನೆ ಅಲ್ಲಿದ್ದ ಮಗನು ಕೇಳಿದ “ಅಮ್ಮ ಬೇಕೆನಗೆ ಉಪ್ಪಿಟ್ಟು ”,

ಪಕ್ಕದಲ್ಲೇ ಇದ್ದ ಮಗಳು ಕೇಳಿದಳು “ಅಮ್ಮ ನನಗೆ ತಂಬಿಟ್ಟು ”,

ಅದೆಲ್ಲಿತ್ತೋ ಕೋಪ – ಒಳಗೆ ಬಂದ ಯಜಮಾನನು TV ಯನ್ನು off ಮಾಡಿ ಸುಮ್ಮನಿರಿಸಿದನು ಎಲ್ಲರನು ನಾಲ್ಕು ನಾಲ್ಕು ಕೊಟ್ಟು ,

ಅಯ್ಯೋ ಕರ್ಮ – ಧಾರಾವಾಹಿಯ ಕೊನೆಯ ಸನ್ನಿವೇಶವು ಮಿಸ್ ಆಇಥಲ್ಲ ಅಂತ ಬೈ ಕೊಂಡ್ರು ತಲೆ ಮೇಲೆ ಕೈ ಇಟ್ಟು. . .

Ajay Pyro
==================================
ನೀರಿಗಾಗಿ ಪರದಾಡಿದ ಜೀವಕೋಟಿಗಾಗಿ
ಪುರಾಣದ ಭಗೀರಥ ಗಂಗಾ_ಜಲದಿಂದ ಪಾವನಗೊಳಿಸಿದ…
ಪುರಾತನರು ಕೆರೆ-ಕಟ್ಟೆ-ಭಾವಿ-ಕಾಲುವೆಗಳಿಂದ ಜಲಧಾರೆ ಹರಿಸಿದರು…
ಆಧುನಿಕರು ಭೂತಾಯಿ ಮಡಿಲಿಗೆ ರಂದ್ರ ಕೊರೆದು ಜಲಧಾರೆ ಹರಿಸಿದರು…

ಆಧುನಿಕರ ಆಟಾಟೋಪಗಳಿಗೆ ಬೆಚ್ಚಿದ ಭೂತಾಯಿ ಋತುಮಾನಗಳ ಗೊಂದಲಕ್ಕೀಡಾದಳು!
ಆಧುನಿಕರ ಸಣ್ಣತನದಿಂದ ಭೂತಾಯ ಮಡಿಲು ಬರಿದಾಯಿತು
ಆಧುನಿಕರ ಮುಂದಾಲೋಚನೆಯಿಲ್ಲದ ಯುಕ್ತಿಗೆ ಕಡಲು ಕೊರೆಯಿತು ; ಮೀತಿಮೀರಿತು
ಆಧುನಿಕರು ಎಚ್ಚರಗೊಂಡಿಲ್ಲ ಕಾಲಬಳಿಯೇ ಜಲಧಾರೆ ಉಕ್ಕಿದರೂ ; ಜೀವ ಮುಕ್ಕುತ್ತಿದ್ದರೂ

ಆಧುನಿಕ ಸೋಗಿನಲ್ಲಿ ಮೈಮರೆತಿದೆ ಮನುಜ ಕುಲಗಳು
ಆಧುನಿಕ ಮೋಜುಗಳಾಗುತ್ತಿವೆ ಸಂಜೆಯ ಸಾವಿನ ಮೇಜವಾನಿಗಳು
ಆಧುನಿಕ ಸವಲತ್ತುಗಳು ವಿಷದ ನಂಜಿನ ತಯಾರಿಕೆಗಳು
ಆಧುನಿಕ ಅಧ್ವಾನಗಳ ಮಧ್ಯೆ ಲಾಭಬಡುಕ ಬಂಡುಕೋರ ಮೇಧಾವಿಗಳು

ಆಧುನಿಕತೆಯ ಆಕರ್ಷಣೆಗೆ ಬಿದ್ದ ಮರುಳ ಮಾನವನಿಗೆ ಪಶ್ಚಾತ್ತಾಪದ ಕೊರಗಿಲ್ಲ
ಆಧುನಿಕ ಯೋಚನಾಲಹರಿಯಿಂದ ಕಾಲಬುಡಕ್ಕೆ ಏರಗಿದರೂ ಎಚ್ಚರಿಲ್ಲ
ಆಧುನಿಕನಾಗಲಿಲ್ಲ ; ಪುರಾತನನಾಗಲಿಲ್ಲ…ಪುಣ್ಯಪುರುಷನಂತೂ ಆಗಲಿಲ್ಲ
ಆಧುನಿಕತೆಯ ಅವಘಡಗಳಿಂದಾಗಿ ಅತಿವೃಷ್ಟಿ-ಅನಾವೃಷ್ಟಿಗಳೆಂಬ ಅವನತಿಯ ಸೂತಕಗಳ ಅರಿವಿಲ್ಲ

Hipparagi Siddaram
”””””””””””””””””””””””””””””””””””””””””””””””””””””””””””””””””””””””
http://www.facebook.com/groups/kannadavesatya/247432748675806/?notif_t=like

ಕನಸುಗಳು ಕಾಣುತಿವೆ

ಕನಸುಗಳು ಕಾಣುತಿವೆ ನಿನ್ನಯ ಕಣ್ಣಲಿ,
ನನ್ನದೆಯ ಗೂಡಲಿ – ನಿನ್ನದೇ ಕಚಗುಳಿ ,
ನಿನ್ನ ನಯನ ಕೆನಕಿತೆನ್ನ – ತಣ್ಣನೆ ಗಾಳಿಲಿ,
ಬಿಸಿಲಿದ್ದರು – ನನಗ್ಯಾಕೋ ಚಳಿಚಳಿ ,
ಕನಸಿನೂರಲಿ – ನೀನಿದ್ದೆ ನನ್ ಬಳಿಯಲಿ,
ಎದೆಯ ಗೂಡಲಿ – ನಿನ್ನದೇ ಚಿಲಿಪಿಲಿ . . .

ಮನದ ಮುಗಿಲಲಿ – ನೀನಾದೆ ದೇವತೆ,
ಜನ್ಮ ಜನ್ಮಕು ಬರೆಯುವೆನು ಈ ರೀತಿ ಕವಿತೆ,
ಬೇಡಿಕೊಂಡರೂನು ನಿನ್ನಲ್ಲಿ – ನನ್ ಕವಿತೆಗಳಿಗೆ ಪ್ರತಿಕ್ರಿಯಿಸಲು ಮರೆತೆ,
ಹಂಬಲಿಸುತ – ನಾ ದೂರದ ಊರಿನಲ್ಲಿ ಅವಿತೆ,
ನಿರ್ದರಿಸಿದ್ದೇನೆ – ಬರೆಯ ಬಾರದೆಂದು ಇನ್ಮುಂದೆ ಕವಿತೆ……

ನಿನ್ ಪ್ರೀತಿಗಾಗಿ ಕಾದೂ ಕಾದು ನಾ ಸತ್ತೆ,
ಕಳೆದುಕೊಂಡ ಪ್ರೀತಿ ಸಿಗುವುದಿಲ್ಲ ಮತ್ತೆ …
Ajay Pyro

ಚಿತ್ರ ನೋಡಿ ಕವನ ಬರೆಯಿರಿ – 12

ಕಣ್ಣಲ್ಲಿ ಇಂಗಿದ ಕನಸು…
ಕಷ್ಟದಲಿ ಮುಳುಗಿ ಕಲ್ಲಾದ ಮನಸು…

ಆಟ-ಪಾಠದಿ ಖುಷಿಯಿಂದ ನಲಿಯುವ ವಯಸ್ಸು..
ಆದರೆ, ಬಡತನದ ಬೇಗೆಯಲ್ಲಿ ಸಿಲುಕಿದೆ ಈ ಕೂಸು..

ಹೊಟ್ಟೆಪಾಡಿಗಾಗಿ ದುಡಿಯಲು ಹೋಗಿಹರು ಅಪ್ಪ-ಅಮ್ಮ..
ಅವರ ಪಾಲಿನ ಕೂಳನು ಹೊತ್ತು ಸಾಗುತಿಹಳು ಈ ಕಂದಮ್ಮ..

ಯಾಕೋ ಕಾಣೇ ಇತ್ತಿಚಿಗೆ ಆ ದೇವರೂ ಕುರುಡನಾಗಿಹನು..
ಸಿರಿವಂತರ ಮನೆಯ ಕೋಣೆಯಲಿ ಬಂಧಿಯಾಗಿರುವನು..

ರಾಜಕೀಯ ಪುಡಾರಿಗಳ ಪೊಳ್ಳು ಭರವಸೆ ಇವರಿಗಿನ್ನೂ ನೀಡಿಲ್ಲ ಆಸರೆ..
ಸಾಲದೆಂಬಂತೆ ಅಭಿವೃದ್ಧಿಯ ನೆಪದಲ್ಲಿ ಇವರ ಗಾಯದ ಮೇಲೆ ಎಳೆಯುತ್ತಿದೆ ಬರೆ
Pradeep Hegde
”””””””””””””””””””””””””””””””””””””””””””””””””
ಹಸಿವೆಯ ತಣಿಸುವ ಅಪ್ಪ ಅಮ್ಮ..
ಅನ್ನಕೆ ದುಡಿಯಲು ಹೋಗಿಹರಮ್ಮ..
ಬುತ್ತಿಯ ಗಂಟನು ಹೊತ್ತು ಒಯ್ದು
ಅವರ ಹಸಿವನ್ನು ತಣಿಸುವೆನಮ್ಮ
Sunitha Manjunath
”””””””””””””””””””””””””””””””””””””””””””””””””
ಎತ್ತಲಾರದಷ್ಟು ಭಾರ ಆ ಬುತ್ತಿ ,
ತೋಳುಗಳಿಗೆ ನೋವಾದರೂ ಅದನ್ನು ಹೊತ್ತಿ ,
ಬರುತ್ತಿದ್ದಾಳೆ ಗುಡ್ಡ ಕಾಡುಗಳನ್ನು ಸುತ್ತಿ ,
ಚಿಂತಿಸುತ್ತಿಲ್ಲ ಸುಡುತ್ತಿದ್ದರು ಬಿಸಿಲಿಗೆ ನೆತ್ತಿ ,

ಅರಿವಿಲ್ಲದೆ -ತೂಗುತ್ತಿದ್ದರೂ ತಲೆಯ ಮೇಲೆ ಕತ್ತಿ ,
ಜೀವನ ಸಾಗಿಸುತ್ತಿದ್ದಾಳೆ ಮಾಡಿಕೊಂಡು ಕುಸ್ತಿ ,

ಇವರ ಪಾಲಿಗೆ ಕಾಣದ ದೇವರೇ ಆಸ್ತಿ ,
ಒಪ್ಪೊತ್ತು ಊಟ ಮಾಡಿದರೆ ಅದೇ ಇವರಿಗೆ ಜಾಸ್ತಿ ,
ಕನಸಾಗಿಯೇ ಉಳಿಯಿತು ಈಕೆಯ ಪಾಲಿಗೆ ಮೋಜು ಮಸ್ತಿ
Ajay Pyro
”””””””””””””””””””””””””””””””””””””””””””””””””
ಕಣ್ಣಲ್ಲಿಹುದು ಸಾವಿರಾರು ಕನಸುಗಳು
ಕನಸುಗಳು ಸಾಕಾರವಾಗುತ್ತಿಲ್ಲದಿಹುದು
ಎಲ್ಲವೂ ಹೊಟ್ಟೆಗಾಗಿಯೇ?
ಯೋಚಿಸುತಿಹುದು ಮನದಾಳದಲ್ಲಿ
ಹೊಟ್ಟೆಯ ಹಸಿವು ನೀಗಿಸಲು
ತೆಲೆಯೇ ಮೇಲಿಹುದು ಬುತ್ತಿ
ಮನದ ಹಸಿವು
ನೀಗಿಸುವವವರು ಎಲ್ಲಿಹರು
ಬುದ್ಧಿ ತುಂಬಿಕೊಳ್ಳುವ ವಯಸ್ಸಲ್ಲಿ
ಬುತ್ತಿ ಹೊತ್ತು ಸಾಗುತಿಹನು.
Rudresh Rajashekharaiah
”””””””””””””””””””””””””””””””””””””””””””””””””
ಹೊನ್ನಿನ ಪುತ್ತಳಿಯಂಥ ಹಸುಬಾಲೆ ಇವಳು
ಬದುಕಿನ ಬಂಡಿಯ ಸಾರಥ್ಯದಲಿ ಪುಟ್ಟಪುಟ್ಟ ಹೆಜ್ಜೆ ಇಡುತ
ತುತ್ತಿನ ಬುತ್ತಿಯ ಹೊತ್ತು ಹೊರಟಿಹಳು…

ಸುಂದರ ಶಿಲ್ಫವ ಕಡೆದ ಬ್ರಹ್ಮ…
ಸುಂದರ ಹಣೆಬರಹ ಬರೆವುದ ಮರೆತ
ಮಗು ನೀನಾಗು ಅವನಿಗೆ ಸವಾಲು…!

ನೀನೆಡೆವ ದಾರಿ ಬಲು ಕಠಿಣ ಮಗುವೆ
ಮರೆಯದಿರು ನೀ ಶಿಕ್ಷಣವ
ಗುರಿ ಮೇಲಿರಲಿ..ಸಾಧಿಸುವ ಛಲನಿನಗಿರಲಿ…

ಅಪ್ಪ, ಅಮ್ಮನ ಕಷ್ಟಕೆ ನೀ ಹೆಗಲು ಕೊಟ್ಟಿರುವೆ..
ಕಲಿ ನೀ ಬದುಕಿನ ಪಾಠ ವಿದ್ಯಾವಂತಳಾಗಿ
ಎಳೆದು ತೋರಿಸು ಈ ಜಗಕೆ ನಿನ್ನ ಗೆಲುವಿನ ತೇರು
Bhagirathi Chandrashekar
”””””””””””””””””””””””””””””””””””””””””””””””””
ಆಟವ ಬಿಟ್ಟು ಬಂದೆ
ಬುತ್ತಿ ಕೊಟ್ಟು ಬತ್ತಿನಿ ಎಂದೆ
ಆಟಕ್ಕೆ ಉಫಿ ಎಂದೆ
ಮೋಸ ಮಾಡಬೆಡಿ ಬಂದೆ ಬಂದೆ

ಅವ್ವ ಎಲ್ಲಿದ್ಯವ್ವ
ಬುತ್ತಿ ತಂದೀವ್ನಿ ಬಾರವ್ವ
ಅಪ್ಪೊ ಬಾರಪ್ಪೊ
ಉಂಡು ಗೈಮೆ ಮಾಡುವೆ ಬಾರಪ್ಪೊ
ಬಿರ್ರಿನ್ ಬರ್ರಪ್ಪೊ ಆಟಕ್ಕೆ ಒತ್ತಾಯಿತು ಬರ್ರಪ್ಪೊ

ಯಾಕೆ ಮಾಗಿ ಇಸ್ಕೂಲ್ಗೆ ಹೊಗ್ಲಿಲ್ಲ್ವೆ
ಇಲ್ಲ ಕಾಣಕ್ಕ ನಾ ವಲ್ಲೆ
ಒಕಲುತಾನ ಕಲಿಬೆಕಂತಲ್ಲೆ
ಅದ್ಕೆ ಕುಂಡ್ಸವರೆ ಮನ್ಯಲ್ಲೆ
Sanjeev Kumar
”””””””””””””””””””””””””””””””””””””””””””””””””
ದುಡಿಮೆಯ ತಪಸ್ಸು
ಒಂದು ಎರಡು
ಲೆಕ್ಕಾ ಓದಿಲ್ಲ
ಎಣಿಸುವ ಹೆಜ್ಜೆ
ಕಾಲಲ್ಲಿಲ್ಲ ಗೆಜ್ಜೆ

ವಯಸ್ಸಿಗೂ ಅರಿಯದ
ಮನಸ್ಸಿಗೂ ನಿಲುಕದ
ಬದುಕು ಬಲು ಭಾರ
ದಾರಿಯು ಇನ್ನೂ ದೂರ

ಹೊತ್ತ ಹೊರೆಯೊಳು
ಕಟ್ಟಿಟ್ಟ ನೂರು ಕನಸು
ಹಾಡುತ ಆಡುತ ಕುಣಿತವಿಲ್ಲ
ದುಡಿಮೆಯ ತಪಸ್ಸು ಬಾಳೆಲ್ಲಾ
|| ಪ್ರಶಾಂತ್ ಖಟಾವಕರ್ ||
Prashanth P Khatavakar
”””””””””””””””””””””””””””””””””””””””””””””””””
ಬಾಳುವೆ ನಾನೂ ಚಲದಿಂದ
ಬುಟ್ಟಿಯ ಹೊತ್ತು
ಮನದೊಳಗತ್ತು
ಬರುತಿಹೆ ಬಾರದ ಮನಸಿಂದ

ಮಣ್ಣಲಿ ನಡೆಯುತ
ಹೆಜ್ಜೆಯ ನಿಕ್ಕುತ
ನಡೆದಿಹೆ ತೋಟದ ಬಯಲತ್ತ

ತಂದೆಯು ಇಲ್ಲಾ
ತಾಯಿಯು ಇಲ್ಲಾ
ನೋಡುವರ್ಯಾರು ನನ್ನತ್ತ

ಮುಸುರೆಯ ತಿಕ್ಕುವ
ಕಸವನು ಗುಡಿಸುವ
ಜೀವನ ನೀಡಿದ ಭಗವಂತ

ಶಾಲೆಯ ಕಲಿಕೆ
ಗೆಳೆಯರ ಜೋಡಿಗೆ
ನನಗೂ ಓದಲು ಆಸೆಯಿದೆ

ಕಳಿಸುವರ್ಯಾರು
ಪಾಠದ ಮನೆಗೆ
ಗುಡಿಸಲ ಕಾಯುವ ಪಾಡುಯಿದೆ

ಇದ್ದರೆ ಇರಲಿ
ಶಕ್ತಿಯ ಮೀರಿ
ಗೆಲ್ಲುವೆ ಬಾಳನು ಬಲದಿಂದ

ಜೀವನವೆಂದು
ಸಾಗುವ ಬಂಡಿ
ಬಾಳುವೆ ನಾನೂ ಚಲದಿಂದ
::ವಸಂತ್ ಕೋಡಿಹಳ್ಳಿ::
ವಸಂತ್ ಆರ್
”””””””””””””””””””””””””””””””””””””””””””””””””
ಅಪ್ಪ-ಅಮ್ಮ ದುಡಿಯುತ್ತಿದ್ದಾರೆ ದಿನದ ರೂಪಾಯಿ
ನಾನು ಮಾಡುತ್ತೇನೆ ಕೈಲಾದ ಸಹಾಯ
ನಮಗೆ ಇಲ್ಲ ಭದ್ರ ಅಡಿಪಾಯ
ದೇವರಿದ್ದಾನೆ, ನಮಗಿಲ್ಲ ಅಪಾಯ
Shishir Hegde
”””””””””””””””””””””””””””””””””””””””””””””””””
ಪಾಪ ಇವಳು ಹಸು ಬಾಲೆ
ಚಪ್ಪಲ್ಲಿಗೂ ಗತಿ ಇಲ್ಲ ಬರಿ ಕಾಲೇ
ಹೊತ್ತಿಹಳು ಮಣ ಭಾರದ ಹೆಡಗೆ
ಹೋಗುತಿಹಳು ಹೊಲದ ಕಡೆಗೆ
ಮನಸಿನಲಿ ಬಣ್ಣ ಬಣ್ಣದ ಕನಸಿನ ಆಟ
ಆದರೂ ವಿದಿಯಿಲ್ಲದೆ ಕರ್ತವ್ಯದ ಕಡೆಗೆ ಓಟ
ಆ ದೇವರಿಗೇಕೆ ನನ್ನ ಮೇಲೆ ಕೋಪ
ಬಡತನವೇ ನನ್ನ ಬಾಳಿಗೆ ಹಿಡಿದ ಶಾಪ
Mamatha Keelar
”””””””””””””””””””””””””””””””””””””””””””””””””
ಅರಳುವ ಸುಮ ಬಾಲೆ
ಅರಿತಿಹಳು ಬದುಕುವ ಕಲೆ
ಭವಿಷ್ಯದ ನಾಡಿನ ನಾರಿಮಣಿ
ಹೊರಟಿಹಳು ಬಾವಿ ರಮಣಿ|

ಹೆತ್ತವರ ಬಡತನ
ಹೆತ್ತೊಡಲಿನ ಕಷ್ಟ-ಕಾರ್ಪಣ್ಯತನ
ಕಲಿಯಬೇಕು ಕಲೆಯೆಂಬ ಜೀವನ
ಹೊರಟಿಹುದು ಮುಗ್ದಮನ|

ಬಡತನವೆಂಬುದು ಶಾಪ
ಬದುಕಿನ ಬಗ್ಗೆ ಅವಳಿಗಿಲ್ಲ ತಾಪ
ಬೇರೆಯವರಿಂದ ಆಕೆಗಿಲ್ಲ ಕರುಣೆ-ಸಂತಾಪ
ಹೊರಟಿಹುದು ಪುಟಾಣಿ ಪಾಪ|

ಸರಕಾರದ ಕಾಯ್ದೆಗಳ ಹಂಗಿಲ್ಲ ಇವಳಿಗೆ
ಕನಸುಗಳ ಕನವರಿಕೆ ಬೇಕಿಲ್ಲ ಇವಳಿಗೆ
ಬಾಲ್ಯವೆಂಬ ಅಪರೂಪತೆ ಗೊತ್ತಿಲ್ಲ ಇವಳಿಗೆ
ಹೊರಟಿಹಳು ಎಲ್ಲಿಗೆಂದು ತಿಳಿದಿಲ್ಲ ಇವಳಿಗೆ|

ಬದುಕಬೇಕು-ಬಾಳಬೇಕು-ಬೆಳಗಿಸಬೇಕು
ತಲೆಮಾರುಗಳು ಸರಪಣಿ ಮುಂದುವರೆಯಬೇಕು
ದೇವರು-ದಿಂಡಿರು, ಸಮಾಜ-ಸಂಕುಲಗಳು ಬದುಕಿಗೆ ಬೇಕು
ಹೊರಟಿಹಳು ಭರವಸೆಯ ಬಾಲೆ!
Hipparagi Siddaram
”””””””””””””””””””””””””””””””””””””””””””””””””
http://www.facebook.com/groups/kannadavesatya/245739935511754/