Tag Archives: ವಸಂತ್ ಆರ್

ಕೊನೆಯ ಮಾತು

ಎಷ್ಟು ಸಮಯವಾಯಿತು
ವಸಂತಗಳು ಕಳೆದುಹೋದವು

ಬಿರು ಬೇಸಿಗೆ, ಚಳಿಯೂ
ಕಾಡಿಸಿ ಹಿಯ್ಯಾಳಿಸಿ ಕರಗಿದವು
ಮತ್ತೊಂದು ಮಳೆ ಬಂದರೂ
ಅವನ್ಯಾಕೆ ಬರಲಿಲ್ಲ ಇನ್ನೂನೆನಪುಗಳ ಒಗ್ಗೂಡಿಸಿ
ಕಣ್ ಮುಚ್ಚಿ ಕುಳಿತಾಗ
“ನಾನಿರುವೆ ನಿನ್ನ ಜೊತೆ”
ಎಂದಷ್ಟೆ ನುಡಿಯುವನು
ಹೇಗೆ ನಂಬಲಿ ಹೇಳಿ ಅವನ
ಈ ಅಪೂರ್ಣವಾದ ಮಾತನ್ನು?ಅವನ ನಿರೀಕ್ಷೆಯಲ್ಲಿ
ಮನಸ್ಸು Continue reading →

ಚಿಗುರು

ಜೀಜವೊಂದುದುರಿ
ನೆಲದೊಡಳ ಹೊಕ್ಕು
ಸಾವದಾನದೀ ತಾ
ಮೈದುಂಬಿ ನಲಿದಿಹುದು

ಸಖಲ ಸಾರವನ್ನೀರಿ
ಸಾವರಿಸಿ ಮಿಡಿದು
ಸೌಭ್ಯಾಗ್ಯದಿಂದ್ ಬೀಗಿ
ನಳನಳಿಸಿ ಬೆಳೆದಿಹುದು

ಯಾರು ಉತ್ತರೋ ಕಾಣೆ
ಯಾರು ನೀರೆರದರೋ ಕಾಣೆ
ಸೊಂಪಿನ ಬಿಂಬಕ್ಕೆ
ಕನ್ನಡಿಯು ಬೇಕೇ?

ಚಿಗುರೆನ್ನ ಚಂಚಲೆಯೆ
ಚಿಗುರೆನ್ನ ಭಾಮಿನಿಯೆ
ಚಿಗುರು ಹೆಮ್ಮರವಾಗಿ
ಸ್ಥಿರವಾಗಿ ನಿಲ್ಲು

ಕುಟಿಲ ಮನಗಳ ತಿದ್ದಿ
ನೆರಳಾಗಿ ನಿಲ್ಲು

– ವಸಂತ್ ಕೋಡಿಹಳ್ಳಿ

ಯಾವುದನ್ನೂ ಲೆಕ್ಕಿಸದೆ ಬೆಳೆಯುತ್ತೇನೆ

ಬೆಳೆಯುತ್ತೇನೆ ಜಗ್ಗದೆ
ಭೂ ಒಡಲು ಬರಿದಾಗುವವರೆಗೂ
ಮರಗಳನ್ನೇ ಕಡಿದುಮುಗಿಸುವವರೆಗೂ
ಹುಲಿ ಸಿಂಹಗಳ ಸದೆ ಬಡಿದು
ದಿಕ್ಕಾಫಾಲಾಗಿಸುವವರೆಗೂ
ಸಕಲ ಜೀವ ಸಂಕುಲಕ್ಕೂ ಕುತ್ತಾದರೂ
ಯೋಚಿಸದೆ ಸಣ್ಣಗೆ ನಗುತ್ತೇನೆ
ಖುಷಿಯಿಂದಲೇ ಕುಣಿಯುತ್ತೇನೆ

ಎದಿರು ನಿಲ್ಲುವ ಮಾತುಗಳಿಗೆ
ಒಂದಷ್ಟು ನೋಟಿನ ಮೂಲಾಮು
ಸಂಕೋಲೆ ಬಿಗಿವ ಕೈಗಳಿಗೆ
ಮಣ ಭಾರದ ಚಿನ್ನದ ಕಡಗಗಳು
ಧಿಕ್ಕರಿಸಿ ನಿಲ್ಲುವ ರೋಷಕ್ಕೆ
ಹೂವಿನ ತೋಟದಲ್ಲೊಂದು
ಅಮೃತ ಶಿಲೆಯ ಸಮಾಧಿ
ಇನ್ನೇನು ಬೇಕು ಹೇಳಿ
ನನ್ನ ಬೆಳವಣಿಗೆಗೆ ಯಾವ
ಕುತ್ತೂ ಬಾರದಂತೆ ಬೆಳೆಯಬಹುದು

ಸುಡುವ ಸೂರ್ಯನ ಹಿಡಿದು
ಬುಟ್ಟಿಯಲ್ಲಿರಿಸಿಸಿಕೊಳ್ಳುತ್ತೇನೆ
ಬೆಳದಿಂಗಳ ಚಂದ್ರನ ಕರೆದು
ಚಂದಾ ವಸೂಲಿಗಾರನನ್ನಾಗಿಸುತ್ತೇನೆ
ಗಾಳಿ ಮಳೆಗೂ ಹಗ್ಗ ಬಿಗಿದು
ಹಿತ್ತಲಲ್ಲಿ ನೇತುಹಾಕುತ್ತೇನೆ
ಒಂದು ಕ್ಷಣವೂ ನಿಲ್ಲದೆ
ನಾನಂತೂ ಬೆಳೆಯುತ್ತೇನೆ

ಇಗೋ ಆಗಸಕ್ಕಾದ
ರಕ್ತ ಕಲೆಗಳ ಗುರುತುಗಳನ್ನು
ಕಂಬನಿ ಮಿಡಿದು ತೋರುತ್ತಿದೆ
ನಕ್ಷತ್ರಗಳು ತಲೆಸುತ್ತಿ ಬೀಳುತ್ತಿವೆ
ಜಗವೆಲ್ಲಾ ಅಲ್ಲೋಲ ಕಲ್ಲೋಲವಾಗುತ್ತಿದೆ
ಆದರೇನಂತೆ!
ನನ್ನ ಬಳಿ ಮೂಲಾಮುಗಳಿಗೇನಿಲ್ಲ ಬರ
ಸಧ್ಯಕ್ಕೆ ನಾನು ಸರ್ವಾಧಿಕಾರಿ
ನಿಲ್ಲದೇ ಬೆಳೆಯುತ್ತಿದ್ದೇನೆ

ಹುಚ್ಚು ಮನ ಉಸಿರಾಡುವವರೆಗೂ
ಬಿಚ್ಚು ಆಸೆಗಳು ಮಿಸುಕಾಡುವವರೆಗೂ
ನಾ ಸರ್ವಾಧಿಕಾರಿಯೆಂಬ ಜಂಭ
ಸರ್ವತಾ ನನ್ನಲ್ಲಿ ನೆಲೆನಿಲ್ಲುವವರೆಗೂ
ನಾನಂತೂ ಬೆಳೆಯುತ್ತಿರುತ್ತೇನೆ
ನನ್ನ ಸರ್ವ ಅಧಿಕಾರದ ಗತ್ತನ್ನು
ಲೋಕಕ್ಕೆಲ್ಲಾ ತಿಳಿಸಿಹೇಳುತ್ತೇನೆ
ಯಾವುದನ್ನೂ ಲೆಕ್ಕಿಸದೆ ಬೆಳೆಯುತ್ತೇನೆ

ವಸಂತ್ ಆರ್ 

ನಾನು ಕವಿಯಲ್ಲ

ಯಾರೋ ಬರೆದಿಟ್ಟ
ಆ ನಾಲ್ಕು ಸಾಲುಗಳು
ಕವನವಾಗುತ್ತಂತೆ
ಎಷ್ಟೊಂದು ವಿಪರ್ಯಾಸ
ನನಗೆ ನಂಬಲಾಗುತ್ತಿಲ್ಲ
ನೀವಾದರೂ ಹೇಳಿ
ಅದು ಕವನವ ಎಂದು?

ನೆನ್ನೆಯಷ್ಟೆ ಬರೆದಿದ್ದ
ಹತ್ತಾರೂ ಪುಟಗಳನ್ನು
ಸಭೆಯಲ್ಲಿ ವಾಚಿಸಲು ಹೊರಟಾಗ
ಎಲ್ಲರು ಗೊಳ್ ಎಂದು ನಕ್ಕರು
ಕಥೆಯೊಳಗಿನ ಕವನವೆಂದರೆ
ಇದೇನ ಮಗು?
ಹತ್ತಲವು ಪ್ರಶ್ನೆಗಳು
ನನ್ನತ್ತ ದಾವಿಸಿದವು

ನಾನು ಮೌನವಾದೆ
ಉತ್ತರಿಸಲು ತಡವರಿಸಿದೆ
ಏಕಾಗ್ರತೆಯ ನೆಪವೊಡ್ಡಿ
ಅಲ್ಲಿಂದ ನಿರ್ಗಮಿಸಿದೆ
ನನಗೆ ಅರ್ಥವಾಗುತ್ತಿಲ್ಲ
ಯಾವುದು ಕವನವೋ?
ಯಾವುದು ಕಥೆಯೋ?
ನಿವಾದರೂ ಹೇಳಿ
ಕಥೆಯೆಂದರೆ ಏನೆಂದು?

ಸಭೆಯಲ್ಲಿನ
ನನ್ನ ಮಾತುಗಳಿಂತಿದ್ದವು
ಕನಸುಗಳ ಕದ್ದು
ಬಯಕೆಗಳ ಹೊದ್ದು
ನೆನಪುಗಳ ಹಾಸಿಗೆಯ ಮೇಲೆ
ಗಾಢವಾಗಿ ನಿದ್ರಿಸುವುದು
ನಾಳೆಯೆಂಬುದು ನೆಪವಷ್ಟೆ
ನೆನ್ನೆಯೆಂಬುದು ಯೋಚನೆಯು
ಆ ನಾಲ್ಕು ಸಾಲುಗಳು
ಕವನವೆಂದರೆ
ಈ ನನ್ನ ಪದಗಳು ಖಂಡಿತ
ಕಥೆಯಾಗಲೇ ಬೇಕು

ಸಭೆಯಲ್ಲಿನ ನನ್ನ ಸಾಲುಗಳು
ಕಥೆಯಾಗಲಿಲ್ಲ
ಕವನವೂ ಆಗಲಿಲ್ಲ
ಅದಕ್ಕಾಗಿ ನಾನು ಕವಿಯಾಗುತ್ತಿಲ್ಲ.

by: ವಸಂತ್ ಕೋಡಿಹಳ್ಳಿ

ನನ್ನ ನೆಮ್ಮದಿ ಹುಡುಕಿಕೊಳ್ಳುತ್ತೇನೆ

ಆಗಸದ ತುಂಬಾ
ಆಸೆಗಳ ನೇತುಹಾಕಿದ್ದೆ
ನನಸಾಗುವ ಸಮಯಕ್ಕಾಗಿ
ಕಾದು ಕುಳಿತಿದ್ದೆ
ಮಿಂಚೊಡೆಯಿತು ಮಳೆಸುರಿಯಿತು
ಎಲ್ಲವೂ ಬಿದ್ದು
ನೀರಲ್ಲಿ ಕೊಚ್ಚಹೋಗಿವೆ
ಹೇಗೆ ಹುಡುಕಲಿ ಹೇಳಿ
ನನ್ನ ಆಸೆಗಳನ್ನು?

ಅವಳ ಹೃದಯ ಅದ ಮಾಡಿ
ಬಯಕೆಗಳ ನೆಟ್ಟಿದ್ದೆ
ಚಿಗುರೊಡೆದು
ಮೊಗ್ಗು-ಬಿರಿಯಬಹುದೆಂದು
ಪೊರೆಕೆಯಿಂದ ಅವೆಲ್ಲವನ್ನೂ
ಗುಡಿಸಿಹಾಕಿದ್ದಾಳೆ
ಇನ್ನೆಲ್ಲಿಯ ಬಯಕೆ!
ಇನ್ನೆಲ್ಲಿಯ ಚಿಗುರು!

ಜಗತ್ತಿಗೇ
ಬುದ್ದಿಹೇಳ ಹೊರಟಿದ್ದೆ
ಶಾಂತಿಯಿಂದಿರಿ
ಸಂಯಮ ಕಾಯ್ದುಕೊಳ್ಳಿ
ನಾವು ಮನುಷ್ಯರು!
ಜಾಡಿಸಿ ಒದ್ದರು
ಒಟ್ಟನಲ್ಲಿ
ನಾನು ಗಾಂಧಿಯಾಗಲಿಲ್ಲ
ಬುದ್ದ ದಾರಿತೋರಲಿಲ್ಲ

ಈಗಷ್ಟೆ ಕವನ ಬರೆಯಲು
ಕುಳಿತಿದ್ದೇನೆ
ನಾನು ಕವಿಯಾಗಬೇಕಿದೆ
ಯಾರೂ
ತೊಂದರೆ ಕೊಡಬೇಡಿ
ನನ್ನ ನೆಮ್ಮದಿಯನ್ನು
ನಾನೇ ಹುಡುಕಿಕೊಳ್ಳುತ್ತೇನೆ
-ವಸಂತ್ ಕೋಡಿಹಳ್ಳಿ 

ಯಾರಾದರೂ ಇವುಗಳನ್ನು ಕೊಳ್ಳಿ

ಇಲ್ಲಿ ಕೆಲವನ್ನು ಮಾರಲಿದ್ದೇನೆ
ಕೊಳ್ಳುವವರ ಇಚ್ಛಗನುಸಾರವಾಗಿ
ತಕ್ಕ ಬೆಲೆ ನಿಗಧಿಪಡಿಸಿದ್ದೇನೆ
ಯಾರೂ ಮುಂದೆ ಬರುತ್ತಿಲ್ಲ
ದಯಮಾಡಿ ಇವುಗಳನ್ನು ಕೊಂಡುಹೋಗಿ

ನನ್ನ ವಸ್ತುಗಳ ಪಟ್ಟಿ ಇಂತಿದೆ,
ಉಪ್ಪರಿಗೆಯ ಮೇಲಿನ ಭಾರವಾದ ಮಾತುಗಳು
ಮನದ ಮೂಲೆಯಲ್ಲಿ ಉಸಿರಾಡುವ ನೆನಪುಗಳು
ಕತ್ತಲು ಕವಿದ ಹೃದಯದ ಒಳಕೋಣೆಯ ನೆರಳು
ಭಾವಕ್ಕೆ ತಕ್ಕಂತೆ ಬದಲಾಗುವ ಮನಸ್ಸು

ವರ್ಷಗಳ ಹಿಂದೆ ಕನ್ನಡಿಗೆ ಮೆತ್ತಿರುವ ಬಿಂದಿಗಳು
ಮುರಿದು ಬಿದ್ದ ಬಳೆಯ ಚೂರುಗಳು
ಜಾತ್ರೆಯಲ್ಲಿ ಅಪ್ಪನು ತೆಗೆದುಕೊಟ್ಟ ಒಡ್ಡಾಣ
ತೆಂಗಿನ ಗರಿಯ ಬಾಸಿಂಗ
ಹಾಳೆಯ ಅಡಿಯಲ್ಲಿ ಮುಚ್ಚಿಟ್ಟ ನವಿಲುಗರಿ

ಮುರಿದು ಬಿದ್ದ ಮನೆಯ ತಾರಸಿ
ಕಂಬಕ್ಕೆ ಕಟ್ಟಿರುವ ಗಾಳಿಪಟದ ದಾರ
ಉಜ್ಜಿರುವ ಹುಣಸೆ ಬೀಜಗಳು
ಜಡೆಗೆ ಮುಡಿಯುತ್ತಿದ್ದ ಕೆಂಪನೆಯ ರಿಬ್ಬನ್ನು
ಖಾಲಿಯಾದ ಗೋರಂಟಿ ಡಬ್ಬಿಗಳು

ಇನ್ನಷ್ಟರ ಸಂಗ್ರಹ ನನ್ನ ಬಳಿಯಿದೆ
ಇವುಗಳನ್ನು ನೋಡಿ ನೆನೆದು ಸಾಕಾಗಿದೆ
ಗತಿಸಿದ ಆಸೆಗಳನ್ನೆಲ್ಲ ಮತ್ತೆ ಧಕ್ಕಿಸಿಕೊಳ್ಳಲಾಗುತ್ತಿಲ್ಲ
ನನ್ನ ನೆಮ್ಮದಿಯ ಸಲುವಾಗಿ ಯಾರಾದರೂ
ಮುಂದೆ ಬಂದು ಇವುಗಳನ್ನು ಕೊಳ್ಳಿ
– ವಸಂತ್ ಕೋಡಿಹಳ್ಳಿ

ವಸಂತ್ ಆರ್

ಇಚ್ಛೆ

ಅವಳ ನೆನಪು
ಬೇಡವೆಂದರೂ ಕಾಡುತ್ತದೆ
ಕೆಂಪು ಇರುವೆ ಕಡಿತಗಿಂತಲೂ ಹೆಚ್ಚಾಗಿ
ಬರೆಯಲಾಗದ ಕವನವನ್ನು
ಬರೆಯಲೇ ಬೇಕೆಂದು ಬೆನ್ನಿಗೆ ಬಿದ್ದ
ಬೇತಾಳನಂತೆ

ಮೌನದಲ್ಲೂ
ಮನಸ್ಸು ತಲ್ಲಣಗೊಳ್ಳುತ್ತದೆ
ಹೃದಯದಲ್ಲಿ ಅವಳ ರೂಪ
ನಿಧಾನವಾಗಿ ತೆರೆದುಕೊಳ್ಳುತ್ತದೆ
ಗಲಿಬಿಲಿಗೊಳ್ಳುವ ಮನಸ್ಸಿನಲ್ಲಿ
ಅಕ್ಷರಗಳು ಮೂಡುವುದಕ್ಕಾದರೂ
ಆಸ್ವದವುಂಟೇ ?

ಅವಳ ಚಂದ್ರನಂತ ನೋಟವನ್ನು
ಏನೆಂದು ಬರೆಯಲಿ
ಬರೆದೇ ಕೂಡಲೆ ?
ಹಾಗದೆನ್ನಲೆ ?
ಭ್ರಾಂತಿಯ ಬಯಲಲ್ಲಿ ಮೂಡವ
ಅಕ್ಷರಗಳಾದರೂ ಎಂತವೋ ಏನೋ ?

ಎಷ್ಟಾದರೂ ಸರಿ ನನ್ನವಳಲ್ಲವೆ
ಅವಳನ್ನೇ ಬರೆಯಲೆತ್ನಿಸುವೆ
ಅದು ಕವನವಾದರೂ ಸರಿ
ಕಥೆಯಂತಾದರೂ ಸರಿ
ಓದಿ ತೀರ್ಮಾನಿಸುವ ಇಚ್ಛೆ
ಖಂಡಿತ ನನ್ನದಲ್ಲವಲ್ಲ
……………………………..by: ವಸಂತ್ ಕೋಡಿಹಳ್ಳಿ

ವಸಂತ್ ಆರ್ 

ಚಿತ್ರ ನೋಡಿ ಕವನ ಬರೆಯಿರಿ – 12

ಕಣ್ಣಲ್ಲಿ ಇಂಗಿದ ಕನಸು…
ಕಷ್ಟದಲಿ ಮುಳುಗಿ ಕಲ್ಲಾದ ಮನಸು…

ಆಟ-ಪಾಠದಿ ಖುಷಿಯಿಂದ ನಲಿಯುವ ವಯಸ್ಸು..
ಆದರೆ, ಬಡತನದ ಬೇಗೆಯಲ್ಲಿ ಸಿಲುಕಿದೆ ಈ ಕೂಸು..

ಹೊಟ್ಟೆಪಾಡಿಗಾಗಿ ದುಡಿಯಲು ಹೋಗಿಹರು ಅಪ್ಪ-ಅಮ್ಮ..
ಅವರ ಪಾಲಿನ ಕೂಳನು ಹೊತ್ತು ಸಾಗುತಿಹಳು ಈ ಕಂದಮ್ಮ..

ಯಾಕೋ ಕಾಣೇ ಇತ್ತಿಚಿಗೆ ಆ ದೇವರೂ ಕುರುಡನಾಗಿಹನು..
ಸಿರಿವಂತರ ಮನೆಯ ಕೋಣೆಯಲಿ ಬಂಧಿಯಾಗಿರುವನು..

ರಾಜಕೀಯ ಪುಡಾರಿಗಳ ಪೊಳ್ಳು ಭರವಸೆ ಇವರಿಗಿನ್ನೂ ನೀಡಿಲ್ಲ ಆಸರೆ..
ಸಾಲದೆಂಬಂತೆ ಅಭಿವೃದ್ಧಿಯ ನೆಪದಲ್ಲಿ ಇವರ ಗಾಯದ ಮೇಲೆ ಎಳೆಯುತ್ತಿದೆ ಬರೆ
Pradeep Hegde
”””””””””””””””””””””””””””””””””””””””””””””””””
ಹಸಿವೆಯ ತಣಿಸುವ ಅಪ್ಪ ಅಮ್ಮ..
ಅನ್ನಕೆ ದುಡಿಯಲು ಹೋಗಿಹರಮ್ಮ..
ಬುತ್ತಿಯ ಗಂಟನು ಹೊತ್ತು ಒಯ್ದು
ಅವರ ಹಸಿವನ್ನು ತಣಿಸುವೆನಮ್ಮ
Sunitha Manjunath
”””””””””””””””””””””””””””””””””””””””””””””””””
ಎತ್ತಲಾರದಷ್ಟು ಭಾರ ಆ ಬುತ್ತಿ ,
ತೋಳುಗಳಿಗೆ ನೋವಾದರೂ ಅದನ್ನು ಹೊತ್ತಿ ,
ಬರುತ್ತಿದ್ದಾಳೆ ಗುಡ್ಡ ಕಾಡುಗಳನ್ನು ಸುತ್ತಿ ,
ಚಿಂತಿಸುತ್ತಿಲ್ಲ ಸುಡುತ್ತಿದ್ದರು ಬಿಸಿಲಿಗೆ ನೆತ್ತಿ ,

ಅರಿವಿಲ್ಲದೆ -ತೂಗುತ್ತಿದ್ದರೂ ತಲೆಯ ಮೇಲೆ ಕತ್ತಿ ,
ಜೀವನ ಸಾಗಿಸುತ್ತಿದ್ದಾಳೆ ಮಾಡಿಕೊಂಡು ಕುಸ್ತಿ ,

ಇವರ ಪಾಲಿಗೆ ಕಾಣದ ದೇವರೇ ಆಸ್ತಿ ,
ಒಪ್ಪೊತ್ತು ಊಟ ಮಾಡಿದರೆ ಅದೇ ಇವರಿಗೆ ಜಾಸ್ತಿ ,
ಕನಸಾಗಿಯೇ ಉಳಿಯಿತು ಈಕೆಯ ಪಾಲಿಗೆ ಮೋಜು ಮಸ್ತಿ
Ajay Pyro
”””””””””””””””””””””””””””””””””””””””””””””””””
ಕಣ್ಣಲ್ಲಿಹುದು ಸಾವಿರಾರು ಕನಸುಗಳು
ಕನಸುಗಳು ಸಾಕಾರವಾಗುತ್ತಿಲ್ಲದಿಹುದು
ಎಲ್ಲವೂ ಹೊಟ್ಟೆಗಾಗಿಯೇ?
ಯೋಚಿಸುತಿಹುದು ಮನದಾಳದಲ್ಲಿ
ಹೊಟ್ಟೆಯ ಹಸಿವು ನೀಗಿಸಲು
ತೆಲೆಯೇ ಮೇಲಿಹುದು ಬುತ್ತಿ
ಮನದ ಹಸಿವು
ನೀಗಿಸುವವವರು ಎಲ್ಲಿಹರು
ಬುದ್ಧಿ ತುಂಬಿಕೊಳ್ಳುವ ವಯಸ್ಸಲ್ಲಿ
ಬುತ್ತಿ ಹೊತ್ತು ಸಾಗುತಿಹನು.
Rudresh Rajashekharaiah
”””””””””””””””””””””””””””””””””””””””””””””””””
ಹೊನ್ನಿನ ಪುತ್ತಳಿಯಂಥ ಹಸುಬಾಲೆ ಇವಳು
ಬದುಕಿನ ಬಂಡಿಯ ಸಾರಥ್ಯದಲಿ ಪುಟ್ಟಪುಟ್ಟ ಹೆಜ್ಜೆ ಇಡುತ
ತುತ್ತಿನ ಬುತ್ತಿಯ ಹೊತ್ತು ಹೊರಟಿಹಳು…

ಸುಂದರ ಶಿಲ್ಫವ ಕಡೆದ ಬ್ರಹ್ಮ…
ಸುಂದರ ಹಣೆಬರಹ ಬರೆವುದ ಮರೆತ
ಮಗು ನೀನಾಗು ಅವನಿಗೆ ಸವಾಲು…!

ನೀನೆಡೆವ ದಾರಿ ಬಲು ಕಠಿಣ ಮಗುವೆ
ಮರೆಯದಿರು ನೀ ಶಿಕ್ಷಣವ
ಗುರಿ ಮೇಲಿರಲಿ..ಸಾಧಿಸುವ ಛಲನಿನಗಿರಲಿ…

ಅಪ್ಪ, ಅಮ್ಮನ ಕಷ್ಟಕೆ ನೀ ಹೆಗಲು ಕೊಟ್ಟಿರುವೆ..
ಕಲಿ ನೀ ಬದುಕಿನ ಪಾಠ ವಿದ್ಯಾವಂತಳಾಗಿ
ಎಳೆದು ತೋರಿಸು ಈ ಜಗಕೆ ನಿನ್ನ ಗೆಲುವಿನ ತೇರು
Bhagirathi Chandrashekar
”””””””””””””””””””””””””””””””””””””””””””””””””
ಆಟವ ಬಿಟ್ಟು ಬಂದೆ
ಬುತ್ತಿ ಕೊಟ್ಟು ಬತ್ತಿನಿ ಎಂದೆ
ಆಟಕ್ಕೆ ಉಫಿ ಎಂದೆ
ಮೋಸ ಮಾಡಬೆಡಿ ಬಂದೆ ಬಂದೆ

ಅವ್ವ ಎಲ್ಲಿದ್ಯವ್ವ
ಬುತ್ತಿ ತಂದೀವ್ನಿ ಬಾರವ್ವ
ಅಪ್ಪೊ ಬಾರಪ್ಪೊ
ಉಂಡು ಗೈಮೆ ಮಾಡುವೆ ಬಾರಪ್ಪೊ
ಬಿರ್ರಿನ್ ಬರ್ರಪ್ಪೊ ಆಟಕ್ಕೆ ಒತ್ತಾಯಿತು ಬರ್ರಪ್ಪೊ

ಯಾಕೆ ಮಾಗಿ ಇಸ್ಕೂಲ್ಗೆ ಹೊಗ್ಲಿಲ್ಲ್ವೆ
ಇಲ್ಲ ಕಾಣಕ್ಕ ನಾ ವಲ್ಲೆ
ಒಕಲುತಾನ ಕಲಿಬೆಕಂತಲ್ಲೆ
ಅದ್ಕೆ ಕುಂಡ್ಸವರೆ ಮನ್ಯಲ್ಲೆ
Sanjeev Kumar
”””””””””””””””””””””””””””””””””””””””””””””””””
ದುಡಿಮೆಯ ತಪಸ್ಸು
ಒಂದು ಎರಡು
ಲೆಕ್ಕಾ ಓದಿಲ್ಲ
ಎಣಿಸುವ ಹೆಜ್ಜೆ
ಕಾಲಲ್ಲಿಲ್ಲ ಗೆಜ್ಜೆ

ವಯಸ್ಸಿಗೂ ಅರಿಯದ
ಮನಸ್ಸಿಗೂ ನಿಲುಕದ
ಬದುಕು ಬಲು ಭಾರ
ದಾರಿಯು ಇನ್ನೂ ದೂರ

ಹೊತ್ತ ಹೊರೆಯೊಳು
ಕಟ್ಟಿಟ್ಟ ನೂರು ಕನಸು
ಹಾಡುತ ಆಡುತ ಕುಣಿತವಿಲ್ಲ
ದುಡಿಮೆಯ ತಪಸ್ಸು ಬಾಳೆಲ್ಲಾ
|| ಪ್ರಶಾಂತ್ ಖಟಾವಕರ್ ||
Prashanth P Khatavakar
”””””””””””””””””””””””””””””””””””””””””””””””””
ಬಾಳುವೆ ನಾನೂ ಚಲದಿಂದ
ಬುಟ್ಟಿಯ ಹೊತ್ತು
ಮನದೊಳಗತ್ತು
ಬರುತಿಹೆ ಬಾರದ ಮನಸಿಂದ

ಮಣ್ಣಲಿ ನಡೆಯುತ
ಹೆಜ್ಜೆಯ ನಿಕ್ಕುತ
ನಡೆದಿಹೆ ತೋಟದ ಬಯಲತ್ತ

ತಂದೆಯು ಇಲ್ಲಾ
ತಾಯಿಯು ಇಲ್ಲಾ
ನೋಡುವರ್ಯಾರು ನನ್ನತ್ತ

ಮುಸುರೆಯ ತಿಕ್ಕುವ
ಕಸವನು ಗುಡಿಸುವ
ಜೀವನ ನೀಡಿದ ಭಗವಂತ

ಶಾಲೆಯ ಕಲಿಕೆ
ಗೆಳೆಯರ ಜೋಡಿಗೆ
ನನಗೂ ಓದಲು ಆಸೆಯಿದೆ

ಕಳಿಸುವರ್ಯಾರು
ಪಾಠದ ಮನೆಗೆ
ಗುಡಿಸಲ ಕಾಯುವ ಪಾಡುಯಿದೆ

ಇದ್ದರೆ ಇರಲಿ
ಶಕ್ತಿಯ ಮೀರಿ
ಗೆಲ್ಲುವೆ ಬಾಳನು ಬಲದಿಂದ

ಜೀವನವೆಂದು
ಸಾಗುವ ಬಂಡಿ
ಬಾಳುವೆ ನಾನೂ ಚಲದಿಂದ
::ವಸಂತ್ ಕೋಡಿಹಳ್ಳಿ::
ವಸಂತ್ ಆರ್
”””””””””””””””””””””””””””””””””””””””””””””””””
ಅಪ್ಪ-ಅಮ್ಮ ದುಡಿಯುತ್ತಿದ್ದಾರೆ ದಿನದ ರೂಪಾಯಿ
ನಾನು ಮಾಡುತ್ತೇನೆ ಕೈಲಾದ ಸಹಾಯ
ನಮಗೆ ಇಲ್ಲ ಭದ್ರ ಅಡಿಪಾಯ
ದೇವರಿದ್ದಾನೆ, ನಮಗಿಲ್ಲ ಅಪಾಯ
Shishir Hegde
”””””””””””””””””””””””””””””””””””””””””””””””””
ಪಾಪ ಇವಳು ಹಸು ಬಾಲೆ
ಚಪ್ಪಲ್ಲಿಗೂ ಗತಿ ಇಲ್ಲ ಬರಿ ಕಾಲೇ
ಹೊತ್ತಿಹಳು ಮಣ ಭಾರದ ಹೆಡಗೆ
ಹೋಗುತಿಹಳು ಹೊಲದ ಕಡೆಗೆ
ಮನಸಿನಲಿ ಬಣ್ಣ ಬಣ್ಣದ ಕನಸಿನ ಆಟ
ಆದರೂ ವಿದಿಯಿಲ್ಲದೆ ಕರ್ತವ್ಯದ ಕಡೆಗೆ ಓಟ
ಆ ದೇವರಿಗೇಕೆ ನನ್ನ ಮೇಲೆ ಕೋಪ
ಬಡತನವೇ ನನ್ನ ಬಾಳಿಗೆ ಹಿಡಿದ ಶಾಪ
Mamatha Keelar
”””””””””””””””””””””””””””””””””””””””””””””””””
ಅರಳುವ ಸುಮ ಬಾಲೆ
ಅರಿತಿಹಳು ಬದುಕುವ ಕಲೆ
ಭವಿಷ್ಯದ ನಾಡಿನ ನಾರಿಮಣಿ
ಹೊರಟಿಹಳು ಬಾವಿ ರಮಣಿ|

ಹೆತ್ತವರ ಬಡತನ
ಹೆತ್ತೊಡಲಿನ ಕಷ್ಟ-ಕಾರ್ಪಣ್ಯತನ
ಕಲಿಯಬೇಕು ಕಲೆಯೆಂಬ ಜೀವನ
ಹೊರಟಿಹುದು ಮುಗ್ದಮನ|

ಬಡತನವೆಂಬುದು ಶಾಪ
ಬದುಕಿನ ಬಗ್ಗೆ ಅವಳಿಗಿಲ್ಲ ತಾಪ
ಬೇರೆಯವರಿಂದ ಆಕೆಗಿಲ್ಲ ಕರುಣೆ-ಸಂತಾಪ
ಹೊರಟಿಹುದು ಪುಟಾಣಿ ಪಾಪ|

ಸರಕಾರದ ಕಾಯ್ದೆಗಳ ಹಂಗಿಲ್ಲ ಇವಳಿಗೆ
ಕನಸುಗಳ ಕನವರಿಕೆ ಬೇಕಿಲ್ಲ ಇವಳಿಗೆ
ಬಾಲ್ಯವೆಂಬ ಅಪರೂಪತೆ ಗೊತ್ತಿಲ್ಲ ಇವಳಿಗೆ
ಹೊರಟಿಹಳು ಎಲ್ಲಿಗೆಂದು ತಿಳಿದಿಲ್ಲ ಇವಳಿಗೆ|

ಬದುಕಬೇಕು-ಬಾಳಬೇಕು-ಬೆಳಗಿಸಬೇಕು
ತಲೆಮಾರುಗಳು ಸರಪಣಿ ಮುಂದುವರೆಯಬೇಕು
ದೇವರು-ದಿಂಡಿರು, ಸಮಾಜ-ಸಂಕುಲಗಳು ಬದುಕಿಗೆ ಬೇಕು
ಹೊರಟಿಹಳು ಭರವಸೆಯ ಬಾಲೆ!
Hipparagi Siddaram
”””””””””””””””””””””””””””””””””””””””””””””””””
http://www.facebook.com/groups/kannadavesatya/245739935511754/