Category Archives: ವೀಡಿಯೋ

ಕುಲದಲ್ಲಿ ಕೀಳ್ಯಾವುದೋ – ವೀಡಿಯೋ

ಸತ್ಯ ಹರಿಶ್ಚಂದ್ರ (1965) – ಕುಲದಲ್ಲಿ ಕೀಳ್ಯಾವುದೋ
ಚಿತ್ರಗೀತೆ | ಸತ್ಯ ಹರಿಶ್ಚಂದ್ರ | ಹುಣಸೂರು ಕೃಷ್ಣಮೂರ್ತಿ | ೧೯೬೫
ಸಂಗೀತ: ಘಂಟಸಾಲ
ಗಾಯನ: ಘಂಟಸಾಲ

ಕುಲದಲ್ಲಿ

ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ
ಹಹಹಹಾ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹೇ.. ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ತಿಲಕ ಇಟ್ಟರೆ ಸ್ವರಗವು ಸಿಗದು
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ತಿಲಕ ಇಟ್ಟರೆ ಸ್ವರಗವು ಸಿಗದು
ವಿಭೂತಿ ಬಳಿದರೆ ಕೈಲಾಸ ಬರದು
ವಿಭೂತಿ ಬಳಿದರೆ ಕೈಲಾಸ ಬರದು
ಇಟ್ಟ ಗಂಧಾ ಬೂದಿ ನಾಮ
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಇಟ್ಟ ಗಂಧಾ ಬೂದಿ ನಾಮ
ಕತ್ತ ಕತ್ತಲು ನಿರನಾಮಾ..

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹ್ಯ..
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ಸೈವರಿಗೆಲ್ಲಾ ಸಿವದೊಡ್ಡೋನು
ಹೆ ಹೆ ಹೆಹೆ ಹೆ ಹೆ ಹೆಹೆ
ವೈಷ್ಣವರಿಗೆ ಹರಿ ಸರ್ವೋತ್ತಮನು
ಹೊ ಹೊ ಹೊಹೊ ಹೊ ಹೊ ಹೊಹೊ
ಸೈವರಿಗೆಲ್ಲಾ ಸಿವದೊಡ್ಡೋನು
ವೈಷ್ಣವರಿಗೆ ಹರಿ ಸರ್ವೋತ್ತಮನು
ಉತ್ತಮ ಮಧ್ಯಮ ಅಧಮರೆಲ್ಲರು
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಉತ್ತಮ ಮಧ್ಯಮ ಅಧಮರೆಲ್ಲರು
ಸತ್ತಮೇಲೆ ಸಮರಾಗ್ತಾರು..

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹಹ್ಯಾ..
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು
ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು
ಏಯ್..
ಮಸಣದಲ್ಲಿ ಈ ವೀರಬಾಹುವ
ಮಸಣದಲ್ಲಿ ಈ ವೀರಬಾಹುವ
ಕೈಯ ಮೇಲ್ಗಡೆ ಬೂದಿಯಾಗ್ತರು

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹಹಹಹಹಹಾ
ಹೊಯ್
ಕೀಳ್ಯಾವ್ದು ಮೇಲ್ಯಾವುದೋ..
ಹೊಯ್
ಕೀಳ್ಯಾವ್ದು ಮೇಲ್ಯಾವುದೋ..
ಸಂಗ್ರಹ: ಕುಮಾರ್ ರಾವ್

ಹಳ್ಳಿಯಾದರೇನು ಶಿವ


ಮೇಯರ್ ಮುತ್ತಣ್ಣ (1969) – ಹಳ್ಳಿಯಾದರೇನು ಶಿವ

ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಪಿ.ಬಿ.ಶ್ರೀನಿವಾಸ್

ಉ..ಉ..ಉ..ಆ..ಹಾ..ಆ
ಹಳ್ಳಿಯಾದರೇನು ಶಿವ ದಿಲ್ಲಿಯಾದರೇನು ಶಿವ
ಜನರೆಲ್ಲಾ ಒಂದೇ ಶಿವ ಎಲ್ಲಾ ನಿನ್ನಂತೆ ಶಿವ
ಜಗವೆಲ್ಲಾ ನಿನ್ನದೇ ಶಿವ

ಎಲ್ಲಾ ಸಂಪತ್ತನಿತ್ತೆ ಎಲ್ಲರಿಗೆಂದೇ ಕೊಟ್ಟೆ
ಎಲ್ಲಾ ಸಂಪತ್ತನಿತ್ತೆ ಎಲ್ಲರಿಗೆಂದೇ ಕೊಟ್ಟೆ
ಹಂಚಿಕೊಂಡು ಬಾಳಲರಿಯದ Continue reading →

ಸಹೋದರರ ಸವಾಲ್ – ಹೇ ನನಗಾಗಿಯೇ ನಿನ್ನಂದವು

ಸಹೋದರರ ಸವಾಲ್ (1977) – ಹೇ ನನಗಾಗಿಯೇ ನಿನ್ನಂದವು

ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಸತ್ಯಂ
ಗಾಯನ: ಎಸ್. ಪಿ. ಬಾಲಸುಭ್ರಂಣ್ಯಂ

ಹೇ ನನಗಾಗಿಯೇ ನಿನ್ನಂದವು,
ನಿನಗಾಗಿಯೇ ಈ ಜನ್ಮವು,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,
ಎಲ್ಲೇ ನೀ ಇರು

ಏನು ಕಣ್ಣ್‌ಗಳು ಏನು ತುಟಿಗಳು, ಬಳುಕಿ ಆಡುವ ನಡುವು
ಬಿರುಸು ನುಡಿಯೊಳು, ಸೊಗಸು ನಡೆಯೊಳು, ಆಸೆ ಮನದೊಳು
ನೋಟದೆ ಬೇಟೆಯನಾಡಲು ನೀನು, ಸೋತೆ ಕ್ಷಣದೊಳು

ಹೇ ನನಗಾಗಿಯೇ ನಿನ್ನಂದವು,
ನಿನಗಾಗಿಯೇ ಈ ಜನ್ಮವು,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,
ಎಲ್ಲೇ ನೀ ಇರು

ಕಣ್ಣು ಕಣ್ಣಲಿ ತುಟಿಯು ತುಟಿಯಲಿ ಸೇರಿ ನಲಿಯಲಿ
ತನುವು ಅರಳಲಿ ಮನವು ಕುಣಿಯಲಿ ಹೃದಯ ಹಾಡಲಿ
ಪ್ರೇಮದ ಗಾನದಿ ಹೃದಯಗಳೆರಡು ಬೆರೆತು ಹೋಗಲಿ

ಹೇ ನನಗಾಗಿಯೇ ನಿನ್ನಂದವು,
ನಿನಗಾಗಿಯೇ ಈ ಜನ್ಮವು,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,
ಎಲ್ಲೇ ನೀ ಇರು

ಕುಮಾರ್ ರಾವ್ 

ತರವಲ್ಲ ತಂಗಿ ನಿನ್ನ ತಂಬೂರೀ

ಗಾಯನ: ಸಿ.ಅಶ್ವಥ್
ಸಂಗೀತ: ಸಿ.ಅಶ್ವಥ್

ರೆರೆರೆರೆರೇ………
ರೆರೆರಾರಾರಾ……..
ರೆರೆ ರೆರೆ ರೇ……………

ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..
ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..
ಸರಸ ಸಂಗೀತದ ಕುರುಹುಗಳರಿಯದೆ
ಬರಿದೆ ಬಾರಿಸದಿರೂ ತಂಬೂರೀ..
ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..

ಮದ್ದಾಲಿ ದನಿಯೊಳು ತಂಬೂರೀ ಅದಾ
ತಿದ್ದಿ ನುಡಿಸಾಬೇಕು ತಂಬೂರೀ..
ಮದ್ದಾಲಿ ದನಿಯೊಳು ತಂಬೂರೀ ಅದಾ
ತಿದ್ದಿ ನುಡಿಸಾಬೇಕು ತಂಬೂರೀ..
ಸಿದ್ಧಸಾಧಕರಾ ವಿದ್ಯೆಗೆ ಒದಗುವಾ
ಸಿದ್ಧಸಾಧಕರಾ ವಿದ್ಯೆಗೆ ಒದಗುವಾ
ಬುದ್ಧಿವಂತಗೆ ದತ್ತಾ ತಂಬೂರೀ..
ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..

ಹಸನಾದ ಮ್ಯಾಳಕೆ ತಂಬೂರೀ ಇದು
ಕುಶಲರಿಗೊಪ್ಪುವಾ ತಂಬೂರೀ..
ಹಸನಾದ ಮ್ಯಾಳಕೆ ತಂಬೂರೀ ಇದು
ಕುಶಲರಿಗೊಪ್ಪುವಾ ತಂಬೂರೀ..
ಶಿಶುನಾಳದೀಶನಾ ಓದು ಪುರಾಣದಿ
ರೆರೆರೇ……………..
ಏ………………….
ಶಿಶುನಾಳದೀಶನಾ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರೀ..

ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..
ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..
ತರವಲ್ಲ ತಂಗಿ ನಿನ್ನ ತಂಬೂರೀ ಸ್ವರ
ಬರದೇ ಬಾರಿಸದಿರು ತಂಬೂರೀ..

Bims Gokul

ಯುದ್ಧಕಾಂಡ (1990) – ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ


ಸಂಗೀತ: ಹಂಸಲೇಖ
ರಾಗ: ಗೌರಿಮನೋಹರಿ (ಕಾರ್ನಾಟಿಕ್)

ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ
ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ

ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಜೀವನಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು
ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ
ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು

ಮೋಡ ಕವಿದಾ ಚಂದ್ರ ಹೊರಗೆ ಬರದೆ ಇರಲು
ಬಾಳಲಿ ಶೂನ್ಯವೆ ತುಂಬಿರಲು
ಭೂಮಿಯೆ ಸಿಡಿಯುತ ಬಿರಿದಿರಲು
ಧೈರ್ಯ ಒಂದೆ ದೀಪಾಅ
ಶೌರ್ಯ ಅದರ ರೂಪಾಅ
ಸತ್ಯ ನಮಗೆ ದಾರಿಇಇ
ಸುಳ್ಳೆ ನಮಗೆ ವೈರಿ
ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು

ಬೆಳ್ಳಿ ರಥದಾ ಸೂರ್ಯ ದಿನವು ನಗುತ ಬರುವಾ
ಆದರು ಅವನಿಗು ಮೇಘಗಳ ಪರದೆಯ ಜೊತೆಯಲಿ ಇದೆ ಜಗಳ
ಬದುಕೆ ಯುದ್ಧಕಾಂಡ
ಹ್ರುದಯ ಯಗ್ನ್ಯ ಕುಂಡ
ಸಿಡಿಯೆ ಅಗ್ನಿಜ್ವಾಲೇ ತೊಡಿಸೆ ವಿಜಯಮಾಲೆ
ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು

ಜೀವನಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು
ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ
ಗೆಲುವೇ ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ

ಕುಮಾರ್ ರಾವ್ 

ತಿರುಗು ಬಾಣ (೧೯೮೨)….ಇದೇ ನಾಡು ಇದೇ ಭಾಷೆ

ಚಿತ್ರ : ತಿರುಗುಬಾಣ

ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ಸತ್ಯಂ
ಗಾಯನ : ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಮತ್ತು ಕೋರಸ್

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ ಕವಿವಾಣಿಯ ನಾಡು
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಚಾಮುಂಡಿ ರಕ್ಷೆಯು ನಮಗೆ ಗೊಮ್ಮಟೇಶ ಕಾವಲು ಇಲ್ಲಿ
ಶೃoಗೇರಿ ಶಾರದೆ ಲೀಲೆ ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಹ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಎಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
-ಸಂಗ್ರಹ: Kumar Rao

ನನ್ನ ಹತ್ತಿರ ಕರೆದಿತ್ತ – ವೀಡಿಯೋ

ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ

ಸಾಹಿತ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಮಲಗು ಮಲಗೆನ್ನ ಮರಿಯೆ

ಸಾಹಿತ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಎಲ್ಲಿ ಜಾರಿತೋ ಮನವು – ವೀಡಿಯೋ

ಸಾಹಿತ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಬಂಗಾರ ನೀರ ಕಡಲಾಚೆಗೀಚೆ – ವೀಡಿಯೋ

ಸಾಹಿತ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಸಾಹಿತ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಮಮತಾ ಕೀಲಾರ್ ರವರ ಕವನಕ್ಕೊಂದು ಹೊಸ ರೂಪ

ವಿಶ್ವಮಾನವ ಗೀತೆ – ಕುವೆಂಪು

ಓ ನನ್ನ ಚೇತನ
ಸಾಹಿತ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

http://www.youtube.com/watch?v=r9Pqy6nz1OE&feature=share

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ – ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ
ಸಾಹಿತ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಕಾಶೀಗ್ ಹೋದ ನಂ ಬಾವ – ಟಿ.ಪಿ.ಕೈಲಾಸಂ

ಕನ್ನಡ ಪದಗೊಳು

ಜಿ . ಪಿ . ರಾಜರತ್ನಂ

ಬಿಡಲಾರೆ ನಾ ಸಿಗರೇಟು

ಪ್ರಾಣೇಶ್ – ತರಳಬಾಳು ಹುಣ್ಣಿಮೆ ಮಹೋತ್ಸವ – 2

ಮುದ್ದು ಕೃಷ್ಣನ ಅನಿಮೇಷನ್ ಚಿತ್ರ

ಮುದ್ದು ಕೃಷ್ಣನ ಅನಿಮೇಷನ್ ಚಿತ್ರ