Category Archives: ಧರ್ಮ

ಹಿಂದೂ ಧರ್ಮ

ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ[೧]. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, “ಶಾಶ್ವತ ಧರ್ಮ” ಎಂಬ ಅರ್ಥಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ.[೨] ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ “ಪ್ರಕಾರಗಳು”, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ. ಯೋಗಿಕ ಸಂಪ್ರದಾಯಗಳು ಮತ್ತು ಕರ್ಮದ ಕಲ್ಪನೆಯನ್ನು ಆಧರಿಸಿದ “ದೈನಿಕ ಸದಾಚಾರ”ದ ವಿಶಾಲವಾದ ವೈವಿಧ್ಯ ಮತ್ತು ಹಿಂದೂ ವಿವಾಹ ಪದ್ಧತಿಗಳಂತಹ ಸಮಾಜದ ಸಂಪ್ರದಾಯಬದ್ಧ ನಡವಳಿಕೆಗಳನ್ನೂ ಹಿಂದೂ ಧರ್ಮವು ಒಳಗೊಳ್ಳುತ್ತದೆ.

ಅದರ ಮೂಲಗಳಲ್ಲಿ ಕಬ್ಬಿಣ ಯುಗದ ಭಾರತದ ಐತಿಹಾಸಿಕ ವೈದಿಕ ಧರ್ಮವಿದೆ, ಮತ್ತು ಹಲವುವೇಳೆ ಹಿಂದೂ ಧರ್ಮವು “ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಧರ್ಮ”[೩] ಅಥವಾ “ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಪ್ರಮುಖ ಸಂಪ್ರದಾಯ” ಎಂದು ಹೇಳಲಾಗುತ್ತದೆ.[೪][೫][೬][೭]. ಹಿಂದೂ ಧರ್ಮವು ವಿವಿಧ ಸಂಪ್ರದಾಯಗಳಿಂದ ರಚಿತವಾಗಿದೆ ಮತ್ತು ಒಬ್ಬ ಏಕಾಂಗಿ ಸಂಸ್ಥಾಪಕನನ್ನು ಹೊಂದಿಲ್ಲ.[೮] ಹಿಂದೂ ಧರ್ಮವು ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳ ನಂತರ ವಿಶ್ವದ ಮೂರನೇ ಅತಿ ದೊಡ್ಡ ಧರ್ಮವಾಗಿದೆ ಮತ್ತು ಭಾರತದಲ್ಲಿ ಸುಮಾರು ೮೩ ಕೋಟಿ ಅನುಯಾಯಿಗಳು ಹಾಗೂ ಒಟ್ಟಾರೆ ಸುಮಾರು ೧೦೦ ಕೋಟಿ ಅನುಯಾಯಿಗಳನ್ನು ಹೊಂದಿದೆ.[೯] ದೊಡ್ಡ ಪ್ರಮಾಣದ ಹಿಂದೂ ಜನಸಂಖ್ಯೆಯಿರುವ ಇತರ ರಾಷ್ಟ್ರಗಳನ್ನು ದಕ್ಷಿಣ ಏಷ್ಯಾದಾದ್ಯಂತ ಕಾಣಬಹುದು. ಭಾರತ, ನೇಪಾಳ ಹಾಗೂ ಶ್ರೀಲಂಕಾದ ಕೆಲವು ಭಾಗಗಳಲ್ಲಿ ಈ ಧರ್ಮದ ಬಹುಪಾಲು ಅನುಯಾಯಿಗಳು ನೆಲೆಸಿದ್ದಾರೆ. ಅದಲ್ಲದೇ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಇಂದು ಹಿಂದೂ ಧರ್ಮದ ಅನುಯಾಯಿಗಳನ್ನು ಕಾಣಬಹುದು.

ಹಿಂದೂ ಧರ್ಮಗ್ರಂಥಗಳ ಅಗಾಧ ಮಂಡಲವನ್ನು ಶ್ರುತಿ (ಕೇಳಿದ್ದು) ಮತ್ತು ಸ್ಮೃತಿ (ಸ್ಮರಣೆಯಲ್ಲಿಟ್ಟಿದ್ದು) ಗ್ರಂಥಗಳು ಎಂದು ವಿಭಜಿಸಲಾಗುತ್ತದೆ. ಈ ಧರ್ಮಗ್ರಂಥಗಳು ಧರ್ಮಶಾಸ್ತ್ರ, ತತ್ತ್ವಶಾಸ್ತ್ರ ಮತ್ತು ಪುರಾಣಗಳನ್ನು ಚರ್ಚಿಸುತ್ತವೆ ಮತ್ತು ಧರ್ಮದ ಆಚರಣೆಯ ಬಗ್ಗೆ ಮಾಹಿತಿ ಒದಗಿಸುತ್ತವೆ. ಈ ಗ್ರಂಥಗಳ ಪೈಕಿ, ವೇದಗಳು ಮತ್ತು ಉಪನಿಷತ್ತುಗಳು Continue reading →

OH MY GOD… ನನ್ನೊಳಗಿನ ಆಸ್ತಿಕನಿಗೆ ಒಂದಷ್ಟು ಗೊಂದಲಗಳು.. ಭಾಗ-2

ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ

ಹಿಂದಿನ ಬಾರಿ ಹೇಳಿದಂತೆ ಕಾಂಜೀಯ ದೇವರ ಮೇಲಿನ ಕೇಸ್ ಅನ್ನು ಜಡ್ಜ್ ಒಪ್ಪಿಕೊಳ್ಳುತ್ತಾರೆ. ಆದರೆ ಭಾರತದಂತಹ ಆಸ್ತಿಕರ ನಾಡಿನಲ್ಲಿ ದೇವರ ಮೇಲೆ ಕೇಸ್ ಹಾಕಿದರೆ ಬದುಕಿಯಾನೆ…? ಅವನ ಮೇಲೆ ರಾಜಕೀಯ ಪ್ರೇರಿತ ಆಕ್ರಮಣವಾಗುತ್ತೆ. ಹಾಗೂ ಹೀಗೂ ತಲೆ ತಪ್ಪಿಸಿ ಓಡುತ್ತಿರುವಾಗ ಆತನ ರಕ್ಷೆಗಾಗಿ ಬರುವವನೇ ಆಧುನಿಕ ಧಿರಿಸಿನ ಭಗವಂತ. ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮ… ಹಾ ಭಗವಂತನೇ ಈತನ ಸಹಾಯಕ್ಕಾಗಿ ಬರುತ್ತಾನೆ.

ಇತ್ತ “Act of God ” ನಿಂದಾಗಿ ಕಷ್ಟಕ್ಕೊಳಗಾದವರೆಲ್ಲಾ ಕಾಂಜೀಯ ಸಹಾಯದಿಂದ ಮಸೀದಿ , ಚರ್ಚುಗಳಿಗೆ ನೋಟೀಸು ಕಳುಹಿಸುತ್ತಾರೆ. ಒಂದು ಹೊತ್ತಿನಲ್ಲಿ ಮೀಡಿಯಾಗಳಿಗೆ ಸುದ್ದಿಯ ವಿಷಯ ಆಗೋದಿಲ್ಲ ಅಂದಿದ್ದ ಕಾಂಜೀ “ಶ್ರೀ ಕೃಷ್ಣನ” ಮಾತು ಕೇಳಿ ಟೀವಿ ಚಾನಲ್ ಒಂದಕ್ಕೆ ಸಂದರ್ಶನ ಕೊಡುತ್ತಾನೆ. ಅಲ್ಲಿ ಆತ ಕೇಳಿದ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರಿಸಿ ಜನರ ಬೆಂಬಲ ಗಳಿಸುತ್ತಾನೆ. ಅಲ್ಲಿನ ಕೆಲವೊಂದು ಗೊಂದಲಗಳು ಹೀಗಿವೆ. ಒಂದು ಪ್ರಶ್ನೆಗೆ ಉತ್ತರಿಸುತ್ತಾ ಕಾಂಜೀ ಹೇಳುತ್ತಾನೆ, ಜನ ನನಗೆ ಸಣ್ಣದಿನಿಂದಲೂ ದೇವರು ನಮ್ಮ ತಂದೆಯ ಹಾಗೆ ಅಂತ ಹೇಳಿಕೊಟ್ಟಿದ್ದಾರೆ. ಹಾಗಾಗಿ ನಾನು ನನ್ನ ತಂದೆಯನ್ನು ನನ್ನ ಹಕ್ಕಿನ ಕುರಿತಾಗಿ ಕೇಳುತ್ತಿದ್ದೇನೆ ಅಂತ ಹೇಳುತ್ತಾನೆ… ವಿಚಿತ್ರ ನೋಡಿ ತನ್ನ ಸುಳ್ಳಿನ ಮೂಲಕ ಉತ್ತಮ ವ್ಯಾಪಾರ ಆಗುತ್ತಿದ್ದಾಗ ಭಗವಂತನಿಲ್ಲ ಅನ್ನುತ್ತಿದ್ದಾಗ ಬಾಲ್ಯದಲ್ಲಿ ದೇವರ ಬಗೆಗೆ ಹೇಳಿಕೊಟ್ಟಿದ್ದು ನೆನಪಾಗುತ್ತಿರಲಿಲ್ಲ, ಹಠಾತ್ ಅಂಗಡಿ ಬಿದ್ದು ನಷ್ಟವಾಗಿದೆ ಅಂದಾಗ ಮಾತ್ರ , ದೇವರು ಅಂದರೆ ನನ್ನ ತಂದೆ ಅನ್ನೋ ಬಾಲ್ಯದ Continue reading →

Oh My God… ನನ್ನೊಳಗಿನ ಆಸ್ತಿಕನಿಗೆ ಒಂದಷ್ಟು ಗೊಂದಲಗಳು

OH MY GOD ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಸಿನಿಮಾವಿದು. ಬಹುತೇಕ ಎಲ್ಲರೂ ನೋಡಿದ್ದಾರೇನೋ… ಬಿಡುಗಡೆಗೆ ಮುನ್ನವೇ ಒಂದಷ್ಟು ಕುತೂಹಲವನ್ನು ಸೃಷ್ಟಿ ಮಾಡಿತ್ತು. ಸಿನಿಮಾ ನೋಡಿ ಬಂದ ಗೆಳೆಯರು ತುಂಬಾನೇ ಚೆನ್ನಾಗಿದೆ ಅಂತ ಅಂದಾಗ ನನ್ನೊಳಗಿನ ಕಾತರ ಅತಿಯಾಗತೊಡಗಿತ್ತು. ಹಾಗೂ ಹೀಗೂ ಸಮಯ ಹೊಂದಿಸಿ ನೋಡೆ ಬಿಟ್ಟೆ… ಹಾ ಚೆನ್ನಾಗೇ ಇದೆ , ಆದರೂ ನಾಸ್ತಿಕರಿಗೂ ಆಸ್ತಿಕರಿಗೂ ಒಂದಷ್ಟು ಗೊಂದಲಗಳನ್ನು ತಂದಿಟ್ಟಿದೆಯೇನೋ ಅನ್ನಿಸಿತು …ಆದರೆ ಪ್ರತಿಯೊಬ್ಬನಲ್ಲೂ ದೇವರ ಬಗೆಗೆ ಸಕಾರಾತ್ಮಕವಾಗಿಯೋ ಅಥವಾ ನಕಾರಾತ್ಮಕವಾಗಿಯೋ ಯೋಚಿಸುವಂತೆ ಮಾಡುವುದಂತೂ ಸತ್ಯ. ಅದರ ಜೊತೆಗೆ ಮಠ ಮಂದಿರಗಳ ಬಗ್ಗೆ, ಸ್ವಾಮೀಜಿಗಳ ಬಗ್ಗೆ ತಾತ್ಸಾರದ ಭಾವನೆ ಮೂಡಿಸುವುದೇನೋ…

ಕಾಂಜೀ ಲಾಲ್ ಜೀ ಮೆಹ್ತಾ ಅನ್ನೋ ಗುಜರಾತಿ ವ್ಯಾಪಾರಿ, ದೇವರ ವಿಗ್ರಹಗಳನ್ನು ಮಾರೋ ವರ್ತಕ ಈ ಚಿತ್ರದ ಮುಖ್ಯ ಕಥಾ ಪಾತ್ರ. ಸಿನಿಮಾ ಆರಂಭಗೊಳ್ಳೋದು ಅವನಲ್ಲಿನ ಒಂದೊಂದೇ ಕೆಟ್ಟ ಗುಣಗಳ ಅನಾವರಣದ ಮೂಲಕ. ಹಣ ಸಂಪಾದನೆಗಾಗಿ ಆತ ಯಾವ ಮಾರ್ಗವನ್ನು ಬಳಸಲು ಹಿಂದೆ ಮುಂದೆ ನೋಡೋಲ್ಲ. ಖಾಲಿ ಬಾಟಲಿಗೆ ಟ್ಯಾಪ್ ನೀರು ತುಂಬಿಸಿ ಗಂಗಾಜಲ ಅಂತ ಮಾರೋದು, ಜನರ ಭಾವನೆಯನ್ನು ತನ್ನ ವ್ಯಾಪಾರವಾಗಿಸೋದು ಅವನಿಗೆ ಕರಗತ. ಪಕ್ಕಾ ನಾಸ್ತಿಕ. ದೇವರ ವಿಗ್ರಹಗಳೆಲ್ಲವೂ ಆತನಿಗೆ ಆದಾಯ ತಂದು ಕೊಡೋ ವಸ್ತುಗಳಷ್ಟೇ… ಆತ ಹೇಳೋದು ಅದನ್ನೆ ಎಲ್ಲಿಯವರೆಗೆ ದೇವರ ಮೇಲಿನ ನಂಬಿಕೆಗಳು ಜನರಲ್ಲಿರುತ್ತೋ ಅಲ್ಲಿವರೆಗೆ ನನ್ನ ವ್ಯಾಪಾರಕ್ಕೆ ಕುಂದು ಕೊರತೆನೇ ಇಲ್ಲ ಅಂತ. ಯಾವುದೋ ಉಚಿತ ಯಾತ್ರೆಯಲ್ಲಿ ಹೋಗಿ ದೇವರ ವಿಗ್ರಹಗಳನ್ನು ಕೊಂಡು ತರುತ್ತಾನೆ, ಗಂಗಾಜಲ ಎಂದು ವೈನ್ ಅನ್ನು ಎಲ್ಲರಿಗೂ ಕುಡಿಸುತ್ತಾನೆ ಮತ್ತು ಮೂರ್ತಿಗಳ ಬಗೆಗೆ ಸುಂದರ ಕಥೆ ಕಟ್ಟಿ ಭಕ್ತರಿಗೆ ಮೋಸ ಮಾಡಿ ಮಾರಾಟ ಮಾಡುವಂತಾದ್ದು ಆತನ ಲಾಭದಾಯಕ ವ್ಯಾಪಾರದ ಒಳಗುಟ್ಟು. ಆತನ ನಾಸ್ತಿಕತೆ ಎಲ್ಲಿಯವರೆಗೆ ಅಂದರೆ ತನ್ನ ಮಗನನ್ನು ಮೊಸರು ಕುಡಿಕೆಯಲ್ಲಿ ಭಾಗವಹಿಸೋದನ್ನು ತಪ್ಪಿಸುವುದಕ್ಕಾಗಿ ಸ್ವಾಮೀಜಿಯೊಬ್ಬರ ಹೆಸರು ಹೇಳಿ, ಭಗವಂತ ಇವತ್ತು ಬೆಣ್ಣೆ ತಿನ್ನುತ್ತಾನೆ….. ಎಲ್ಲರೂ ನಿಮ್ಮ ಮನೆಯ ಮೂರ್ತಿಗೆ ಇಲ್ಲವೆ ಹತ್ತಿರದ ಮೂರ್ತಿಗೆ ನೀವೆ ನಿಮ್ಮ ಕೈಯಾರೆ ತಿನ್ನಿಸಿ ಈ ಚಮತ್ಕಾರ ನಡೆಯೋದು ಬರಿಯ ಒಂದು ಘಂಟೆಯವರೆಗೆ ಮಾತ್ರ … ಅಂತ ಅಪಪ್ರಚಾರ ಮಾಡುತ್ತಾನೆ.( ವಿಚಿತ್ರ ಅಂದರೆ ಅವನ ಮಾತು ಕೇಳುತ್ತಿದ್ದಂತೆ ಜನ ಚೆಲ್ಲಾಪಿಲ್ಲಿ… ಯಾರೋ ಒಬ್ಬ ಅಪರಿಚಿತ ಸಂಘಟಕರ ಕಣ್ಣು ತಪ್ಪಿಸಿ ಸ್ಟೇಜ್ ಗೆ ಗೊತ್ತಾಗದಂತೆ ಹೋಗಿ ಈ ರೀತಿ ಅನೌನ್ಸ್ ಮಾಡೋದಿಕ್ಕೆ ಆಗೋದು ಮತ್ತು ಅದನ್ನು ತಟಕ್ಕನೆ ನಂಬಿ ಓಡೋ ಜನರು ಸಿನಿಮಾದಲ್ಲಿ ಮಾತ್ರ ಸಿಗೋಕೆ ಸಾಧ್ಯ…)ಆತನ ಈ ರೀತಿಯ ನಡೆಯಿಂದ ಅದೇನಾಗುತ್ತೋ ಹಠಾತ್ತಾಗಿ ಅಕಾಶದಲ್ಲಿ ಕಾರ್ಮೋಡಗಳುಒಟ್ಟಾಗಿ ಜೋರಾದ ಮಳೆ ಬಂದು ಈತನ ಅಂಗಡಿ ಬಿದ್ದು ಹೋಗುತ್ತೆ. ವಿಶೇಷ ಅಂದ್ರೆ ಇವನ ಅಂಗಡಿಗಿಂತಲೂ ದುರ್ಬಲ ಅಂಗಡಿಗಳಿದ್ದರೂ ಇವನ ಅಂಗಡಿ ಒಂದು ಮಾತ್ರ ಬಿದ್ದು ಬಿಡುತ್ತೆ. ಈತನಿಗೆ ಬುದ್ಧಿ ಕಲಿಸಲು Continue reading →

ನಿವೇದಿತಾ

ಸ್ವಾಮಿ ವಿವೇಕಾನಂದರ ಪದತಳದಲ್ಲಿ ಅರಳಿದ ಕುಸುಮ ಭಗಿನಿ ನಿವೇದಿತಾ :

ನಮಸ್ತೆ,

ಇಂದು ನಮ್ಮ ಸೋದರಿ ನಿವೇದಿತಾ ಅವರ ಜನ್ಮದಿನ. ನಿವೇದಿತಾ ಅವರ ಜೀವನವನ್ನು ನಮ್ಮ ದೇಶಕ್ಕಾಗಿ ತ್ಯಾಗ ಮಾಡಿದವರು. ಉದಾರ ಮನಸ್ಸು ಅವರದ್ದು. ಸ್ವಾಮಿ ವಿವೇಕಾನಂದರ ಭವ್ಯ ಭಾರತದ ಕನಸ್ಸನ್ನು ನನಸಾಗಿಸಲು ಸಾಕಷ್ಟು ಪ್ರಯತ್ನಿಸಿದರು. ಆ ಕಾಲದಲ್ಲಿ ಮಹಿಳೆಯರಿಗೆಶಾಲೆಗಳು ಇರಲಿಲ್ಲ. ಜ್ಞಾನವೂ ಕಡಿಮೆಯಿತ್ತು. ಆದರೆ, ಈ ಕಾಲದಲ್ಲಿ ನೋಡಿ, ಎಷ್ಟೋ ಮಹಿಳೆಯರು ವಿದ್ಯಾವಂತರಾಗಿ ಜೀವನ ನಡೆಸುತ್ತಿರುವರು.ಇದೆಲ್ಲಾ ನಿವೇದಿತಾ ಅವರ ಪರಿಶ್ರಮದಿಂದ ! ನಿವೇದಿತಾ ಅವರು ಮನೆ ಮನೆಗಳಿಗೆ ಹೋಗಿ ಮನವೊಲಿಸಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಜಾಗೃತಿ ಮೂಡಿಸಿ ಅನೇಕ ಶಾಲೆಗಳನ್ನು ಕಟ್ಟಿಸಿದರು. ಅಲ್ಲದೇ, ಪ್ಲೇಗ್ ರೋಗ ಬಂದಿದ್ದಾಗ ಜನರ ಸೇವೆ ಮಾಡಿದರು. ಅವರು ಅಸಾಮಾನ್ಯ ಮಹಿಳೆ. ಅವರ ದೇಶವನ್ನು ಬಿಟ್ಟು ಬಂದಾಗಲೂ ಅವರ ಮನಸ್ಸಿನಲ್ಲಿ ಅವರ ದೇಶದ ಜನರು ಅವರನ್ನು ದೂರವಿಡುತ್ತಾರೆಂದು ಹಿಂಸೆ, ನೋವಾಗುತ್ತಿತ್ತು. ಆದರೂ, ಭಾರತ ದೇಶಕ್ಕೆ ಅದೆಲ್ಲ ತ್ಯಾಗ ಮಾಡಿದ್ದು ಅವರ ಪ್ರೀತಿ, ಗೌರವ ದೊಡ್ಡದು ಅಲ್ಲವೇ ? ಅವರು ನಮ್ಮವರೇ ಎಂದು ಅವರ ಜನ್ಮದಿನವನ್ನು ನೆನೆಸಿಕೊಂಡು ಆಚರಿಸೋಣ.

ಅವರ ಜೀವನವನ್ನು ತಿಳಿಸುತ್ತಿದ್ದೇನೆ….
೧೮೬೭ರ ಅಕ್ಟೋಬರ್ ೨೮ರಂದು ಮಾರ್ಗರೆಟ್ ಎಲಿಜಬೆತ್ ನೊಬೆಲ್(ನಿವೇದಿತಾ) ಐರ್ಲೆ೦ಡಿನಲ್ಲಿ ಹುಟ್ಟಿದಳು.ತಾಯಿ ಮೇರಿ ಇಸಬೆಲ್, ತಂದೆ ಸಾಮ್ಯುಅಲ್. ಐರ್ಲೆ೦ಡಿನಲ್ಲಿ ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ನಡೆದಿದ್ದಾಗ ಅವಳ ಅಜ್ಜ ಹ್ಯಾಮಿಲ್ಟನ್ ಭಾಗವಹಿಸಿ, ಮನೆಮಾತಾಗಿದ್ದರು. ತಮ್ಮ ಅಜ್ಜನಿಂದ ಅಪಾರವಾದ ಧೈರ್ಯ ಮತ್ತು ದೇಶಭಕ್ತಿ, ಧರ್ಮಗುರುವಾದ ತಂದೆಯಿಂದ “ಮಾನವ ಸೇವೆಯೇ ಭಗವಂತನ ಸೇವೆ” ಎಂಬ ಆದರ್ಶಗಳನ್ನು ಬಾಲ್ಯದಿಂದಲೇ ಅವಳು ರೂಢಿಸಿಕೊಂಡಿದ್ದಳು. ಅಷ್ಟೇ ಅಲ್ಲ, ದಾಷ್ಟ್ರಭಕ್ತಿ, ದೈವಭಕ್ತಿ ಜೊತೆಯಾಗಿ ಅವಳ ಹೃದಯದಲ್ಲಿ ಬೆಳೆದವು. ದುಃಖದಲ್ಲಿರುವವರನ್ನು ಅನುಕಂಪದಿಂದ ಕಾಣುವ ಗುಣ ಬೆಳೆದವು. ಶಾಲೆಯಲ್ಲೂ ಎಲ್ಲರಿಗೂ ಅಚ್ಚುಮೆಚ್ಚು ಆಗಿದ್ದಳು. ರಗ್ಬಿ ಎನ್ನುವ ಸ್ಥಳದಲ್ಲಿ ಹೆಣ್ಣುಮಕ್ಕಳ ಉಚಿತ ಅನಾಥಾಲಯದಲ್ಲಿ ಒಂದು ವರ್ಷ ಕೆಲಸ ಮಾಡಿದಳು. ನಂತರ, ರೆಕ್ಸ್ ಹಾಮ್ ಎನ್ನುವ ಗಣಿಕೇಂದ್ರದಲ್ಲಿದ್ದ ಸೆಕೆಂಡರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡಿದಳು. ಸಮಾಜ ಸೇವಕಿಯಾಗಿಯೂ ಕೆಲಸ ಪ್ರಾರಂಭಿಸಿದಳು.೧೮೯೨ರಲ್ಲಿ ತನ್ನದೇ ಸ್ವಂತ ಶಾಲೆಯನ್ನು ಪ್ರಾರಂಭಿಸಿದಳು. ಈ ಶಾಲೆ ಬಹುಬೇಗ ಜನಪ್ರಿಯವಾಯಿತು. ಅವಳು ಮದುವೆಯಾಗಬೇಕು ಎನ್ನುವ ಹಂತದಲ್ಲಿ ಮದುವೆ ಮುರಿದುಬಿತ್ತು. ೧೮೯೫, ಮಾರ್ಗರೆಟ್ ಸ್ವಾಮಿ ವಿವೇಕಾನಂದರನ್ನು ಕಂಡ ವರ್ಷ. ಅದು ಅವಳ ಜೀವನದ ದಿಕ್ಕನ್ನೇ ಬದಲಾಯಿಸಿದ ಮಹತ್ವದ ವರ್ಷ. ಈ ಭೇಟಿಯ ನಂತರ ಅವಳು ಸ್ವಾಮೀಜಿಯ ಮಾತು-ಬರಹಗಳನ್ನು ಮತ್ತೆ-ಮತ್ತೆ ಓದಿದಳು. ಭಾರತೀಯ ತತ್ವಶಾಸ್ತ್ರ, ಉಪನಿಷತ್ತು, ಭಗವದ್ಗೀತೆಯನ್ನು ಅಧ್ಯಯನ ಮಾಡಿ ಚರ್ಚೆ ಮಾಡಿದಳು. ಕ್ರಮೇಣ ಅವಳ ಸಂಶಯಗಳೆಲ್ಲ ದೂರವಾದವು. ವಿವೇಕಾನಂದರು ಭಾರತದ ಬಡಮಕ್ಕಳ, ಸ್ತ್ರೀಯರ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಕುರಿತು ಮಾತನಾಡುತ್ತಿರುವಾಗ ಮಾರ್ಗರೆಟ್ ” ನಾನು ಸಿದ್ಧಳಾಗಿದ್ದೇನೆ, ಆ ಕೆಲಸ ಮಾಡುತ್ತೇನೆ” ಎಂದಳು. ಭಾರತಕ್ಕೆ ಬಂದಮೇಲೆ ಕಲ್ಕತ್ತೆಯ ಬೇಲೂರು ಮಠದ ಅತಿಥಿಗೃಹದಲ್ಲಿದ್ದರು. ಅವಳ ಶಿಕ್ಷಣ ಪ್ರಾರಂಭವಾಯಿತು. ಪಾಶ್ಚಾತ್ಯ ಮಹಿಳೆಯರಿಗೆ ಬೋಧನೆ ಮಾಡುತ್ತಿದ್ದಳು. ಇಲ್ಲಿಯ ಜನರ ಕೆಲವು ಭಾವನೆಗಳು, ಆಚರಣೆಗಳು ಅವಳಿಗೆ ಒರಟಾಗಿ, ವಿಚಿತ್ರವಾಗಿ ಕಾಣುತ್ತಿದ್ದವು. ಆದರೂ ಅವರು ಗೌರವದಿಂದ, ತಾಳ್ಮೆಯಿಂದ ಸಹಿಸಿಕೊಂಡರು. ಈ ದೇಶದಲ್ಲಿಯೇ ಹುಟ್ಟಿಬೆಳೆದವಳಂತೆ ಭಾರತೀಯರೊಡನೆ ಹೊಂದಿಕೊಳ್ಳತೊಡಗಿದಳು. ೧೮೯೮ ರ ಮಾರ್ಚ್ ೧೭ರಂದು ಶ್ರೀಮಾತೆ ಶಾರದಾದೇವಿಯವರನ್ನು ಭೇಟಿಯಾದರು. ಬೇಲೂರು ನಿವೇಶನದ ಬಳಿ ಇದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಅವಳಿಗೆ ‘ನಿವೇದಿತಾ !’ ಎಂಬ ನೂತನ ಹೆಸರಿಟ್ಟರು. ೧೮೯೮ ರ ನವೆಂಬರ್ ೧೩ರಂದು ನಿವೇದಿತಾಳ ಶಾಲೆ ಪ್ರಾರಂಭವಾಯಿತು. ಆಗಿನ ಕಾಲದಲ್ಲಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ನಿವೇದಿತಾ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಪರಿಶ್ರಮ ಪಟ್ಟರು. ಸ್ವಾಮೀಜಿ ಶಾಲೆಯನ್ನು ನಡೆಸಲು ನಿವೇದಿತಾಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಮಹಿಳೆಯರ ಉನ್ನತಿಗಾಗಿ ಶ್ರಮಿಸುವವರು ಹೇಗಿರಬೇಕು ಎಂದು ಅವಳಿಗೆ ವಿವರಿಸುತ್ತಿದ್ದರು. ಈ ಉದ್ದೇಶಕ್ಕಾಗಿ ಅವಳು ತನ್ನನ್ನೇ ಸರ್ಮಪಿಸಿಕೊಂಡಳು. ಕ್ರಮೇಣ ನಿವೇದಿತಾ ಬೇರೆ ದೇಶದವಳು ಎನ್ನುವುದನ್ನು ಕಲ್ಕತ್ತೆಯ ಜನರು ಮರೆಯುತ್ತ ಬಂದರು. ಬ್ರಹ್ಮ ಸಮಾಜದಲ್ಲಿ ಉಪನ್ಯಾಸ ಕೊಡಲು ಆರಂಭಿಸಿದ್ದು ಅವಳಿಟ್ಟ ಮೊದಲ ಹೆಜ್ಜೆ. ಕಲ್ಕತ್ತೆಗೆ ಪ್ಲೇಗ್ ಕಾಯಿಲೆ ಕಾಲಿಟ್ಟಿತು. ಅವಳು ಹಿಂಜರಿಯದೆ ಗಲ್ಲಿಗಳನ್ನು ರಸ್ತೆಗಳನ್ನು ಶುಚಿ ಮಾಡಿದಳು. ಒಂದು ತಿಂಗಳು ಎದೆಬಿಡದೆ ರೋಗಿಗಳ ಸೇವೆ ಮಾಡಿದಳು. ಕ್ರಮೇಣ ಪ್ಲೇಗ್ ಕಡಿಮೆಯಾಯಿತು. Continue reading →

ತಮಸೋಮಾ ಜ್ಯೋತಿರ್ಗಮಯ – 4

ನವಗ್ರಹ ಮತ್ತು ದೀಪರಾಧನೆ…

ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುದಾಯಚ
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ

ಈ ಮಂತ್ರವನ್ನು ಪಠಿಸಿ ಬೆಳ್ಳಿ ದೀಪವನ್ನು ಹಚ್ಚುವುದರಿಂದ ನವಗ್ರಹ ಶಾಂತಿಯ ಫಲಪ್ರಾಪ್ತಿಯಾಗುತ್ತದೆ.

ಸೂರ್ಯ :

ಜಪಾ ಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ ||

ಈ ಮಂತ್ರದೊಂದಿಗೆ ಸೂರ್ಯ ದೇವರಿಗೆ ಬೆಳ್ಳಿಯ ನಿರಾಜನ ಬೆಳಗುವುದರಿಂದ ಸೂರ್ಯ ಸಂಪ್ರೀತನಾಗುತ್ತಾನೆ, ಸೂರ್ಯನಿಗೆ ಬೆಳ್ಳಿ ದೀಪ ಬೆಳಗುವುದರಿಂದ ಬಡತನ ನಿವಾರಣೆಯಾಗುತ್ತದೆ, ಆರೋಗ್ಯ ಪ್ರಾಪ್ತಿಯಾಗುತ್ತದೆ, ಶತ್ರು ದಮನವಾಗುತ್ತದೆ. ದೀಪ ಬೆಳಗಿದವನು ತೇಜೋವಂತನಾಗುತ್ತಾನೆ. ಆದಿತ್ಯ ಹೃದಯ ವನ್ನು ಪಠಿಸಿ ಬೆಳ್ಳಿ ದೀಪವನ್ನು ಬೆಳಗಿದರಂತೂ ರಾಜಯೋಗ ದೊರೆತು ಅಧಿಕಾರ ಪ್ರಾಪ್ತವಾಗುತ್ತದೆ.

ಚಂದ್ರ :

ಶ್ರೀಮಾನ್ ಶಶಿಧರಶ್ಚಂದ್ರೋ ತಾರಾಧೀಶೋ ನಿಶಾಕರಃ |
ಸುಧಾನಿಧಿಸ್ಸದಾರಾಧ್ಯಸ್ಸತ್ಪತಿಸ್ಸಾಧು ಪೂಜಿತಃ ||

ಈ ಮಂತ್ರದೊಂದಿಗೆ ಚಂದ್ರನಿಗೆ ಬೆಳ್ಳಿ ದೀಪ ಬೆಳಗುವುದರಿಂದ Continue reading →

ಭಾರತ ದರ್ಶನ -4

“ಗಾಯಂತಿ ದೇವಾಃ ಕಿಲ ಗೀತಕಾನಿ ಧನ್ಯಾಸ್ತು ಯೇ ಭಾರತ ಭೂಮಿಭಾಗೇ।
ಸ್ವರ್ಗಾಪವರ್ಗಾಸ್ಪದ ಹೇತುಭೂತೇ ಭವಂತಿ ಭೂಯಃ ಪುರುಷಾಃ ಸುರತ್ವಾತ್॥”

(ಸ್ವರ್ಗಕ್ಕೆ ಮುಕ್ತಿಗೆ ದ್ವಾರವಾದ ಭಾರತದಲ್ಲಿ ಹುಟ್ಟಿದವರು ದೇವತೆಗಳಿಗಿಂತ ಧನ್ಯರು ಎಂದು ದೇವತೆಗಳು ಹಾಡಿ ಹೊಗಳಿದ್ದಾರೆ). ಜಗನ್ಮಾತೆ ಆದಿಶಕ್ತಿ ಮಹಾದುರ್ಗೆ ಮೈತಾಳಿದ ಜೀವಂತ ಅವತಾರವೇ ಭಾರತಮಾತೆ ಎಂದರು ಮಹಾಯೋಗಿ ಅರವಿಂದ.

ಪ್ರತಿಯೊಂದು ಜೀವಿಗೆ ಹುಟ್ಟು ಹೇಗೋ ಸಾವೂ ಅನಿವಾರ್ಯ. ಇದು ಜೀವಿಗೆ ಮಾತ್ರವಲ್ಲ. ಜನಾಂಗಕ್ಕೂ ಕೂಡಾ! ಜಗತ್ತಿನಲ್ಲಿ ಅದೆಷ್ಟೋ ಜನಾಂಗಗಳು ಈ ಜನನ ಮರಣಗಳ ಪ್ರಭಾವಕ್ಕೆ ಸಿಲುಕಿ ಯಾ ಕಾಲದ ಕ್ರೂರ ಆಘಾತಕ್ಕೆ ಸಿಲುಕಿಯೋ ನಾಶವಾದವು. ಆದರೆ ಭಾರತ ಮಾತ್ರ ಇದಕ್ಕೆ ಅಪವಾದ. ಇದರ ಹುಟ್ಟನ್ನು ನಿರ್ಧರಿಸುವಲ್ಲಿ ಇತಿಹಾಸಕಾರರಿಗೆ ಯಶಸ್ಸು ಸಿಕ್ಕಿಲ್ಲ. ಜ್ಞಾತ ಜಗತ್ತಿನಲ್ಲಿ ತಾಯಿ ಶಾರದೆಯ ಪ್ರಥಮ ವೀಣಾ ಝೇಂಕಾರ ಋಗ್ವೇದದ ರೂಪದಲ್ಲಿ ಹೊರಹೊಮ್ಮಿತು ಎಂದರೆ ಅತಿಶಯೋಕ್ತಿ ಆಗಲಾರದು. ವಿಶ್ವದ ಬಹುತೇಕ ನಾಗರೀಕತೆಗಳು ಹುಟ್ಟಿದವು, ಕೆಲಕಾಲ ಮಿಂಚು ಹುಳಗಳಂತೆ ಮಿಂಚಿದವು, ಅಲ್ಪಾಯುಗಳಾಗಿ ಕಾಲಗರ್ಭ ಸೇರಿದವು. ಇಡೀ ಯೂರೋಪಗೆ ತತ್ವಜ್ಞಾನ ನೀಡಿದ ಹಾಗೂ ನಾವು ಈ ವಿಶ್ವವನ್ನು ಆಳಲು ಹುಟ್ಟಿದವರು, ಉಳಿದೆಲ್ಲರು ನಮ್ಮ ದಾಸ್ಯವನ್ನು ಒಪ್ಪಿಕೊಳ್ಳಬೇಕು ಅಂತ ಉನ್ಮತ್ತವಾಗಿ ಘೋಷಿಸಿ ಮೆರೆದ ಗ್ರೀಕರು ಇಂದು ಎಲ್ಲಿದ್ದಾರೆ? ಅಸಹಿಷ್ಣು ಏಕದೇವೋಪಾಸಕ ಮತಾಂಧ ಸಿರಿಲ್ನ ಆಕ್ರಮಣದಿಂದ ತತ್ತರಿಸಿದ ಆ ಪ್ರಾಚೀನ ದೇಶ ತನ್ನ ಹೆಸರನ್ನು ಬಿಟ್ಟು ಉಳಿದೆಲ್ಲವನ್ನು ಕಳಕೊಂಡಿತು. ಆತನ ಆಕ್ರಮಣದ ಬಳಿಕ Continue reading →

ತಮಸೋಮಾ ಜ್ಯೋತಿರ್ಗಮಯ – 3

ಬೆಳ್ಳಿಯ ದೀಪ

ಲೋಹಗಳ ದೀಪಗಳಲ್ಲಿ ಶ್ರೇಷ್ಟವಾದುದು ಬೆಳ್ಳಿಯ ದೀಪವಂತೆ…ಸಾಂಕೇತಿಕವಾಗಿ ಬೆಳ್ಳಿಯು ಚಂದ್ರನ ಕಾರಕ ಲೋಹವಾಗಿದ್ದರು ವೈದಿಕವಾಗಿ ಬೆಳ್ಳಿ ಗುರು ಗ್ರಹದ ಲೋಹ. ಮೊದಲೆಲ್ಲಾ ಶುಭ ಸಮಾರಂಭಗಳಲ್ಲಿ ಬೆಳ್ಳಿಯ ದೀಪ ಕೊಡುವ ಸಂಪ್ರದಾಯ ಇದೇ ಕಾರಣದಿಂದ ಪ್ರಾರಂಭವಾಗಿರಬಹುದು ಅನ್ನೋದು ಲೇಖಕರ ಅಭಿಪ್ರಾಯ…ಲೇಖಕರು ಬೆಳ್ಳಿ ದೀಪದ ಮಹತ್ವವನ್ನು ಈ ರೀತಿ ಪಟ್ಟಿ ಮಾಡಿದ್ದಾರೆ

* ಹಸುವಿನ ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಬಳಸಿ ಬೆಳ್ಳಿಯ ದೀಪವನ್ನು ಯಾರ ಮನೆಯಲ್ಲಿ ಬೆಳಗಲಾಗುತ್ತದೋ , ಆದನ್ನು ಹಚ್ಚಿದವರಿಗೆ ಮಾತ್ರವಲ್ಲದೇ ಆ ಮನೆಯವರಿಗೆ ಅಷ್ಟೈಶ್ವರ್ಯ ಪ್ರಾಪ್ತವಾಗುತ್ತದೆ.

* ಬೆಳ್ಳಿ ದೀಪವನ್ನು ವೇದ ಮಾತೆ ಗಾಯತ್ರಿ ದೇವಿ, ಮಹಿಷಾಸುರ ಮರ್ದಿನಿ, ಶ್ರೀ ಚಾಮುಂಡೇಶ್ವರಿ, ಶ್ರೀ ಚಕ್ರಸ್ಥಿತ ಚಕ್ರೇಶ್ವರಿ, ಶ್ರೀ ಲಲಿತಾ ತ್ರಿಪುರ ಸುಂದರಿ, ರಾಜರಾಜೇಶ್ವರಿ, ಶ್ರೀ ಲಕ್ಷ್ಮೀಸಹಿತ ನಾರಾಯಣ ಸಾಲಿಗ್ರಾಮ, ಬಲಮುರಿ ಶಂಖ, ಬಲಮುರಿ ಗಣಪನ ಎದುರು ಬೆಳಗಿದಲ್ಲಿ ಅವರ ಇಷ್ಟಾರ್ಥಗಳು ಅತಿ ಶೀಘ್ರದಲ್ಲಿ ಈಡೇರುವುದು.

* ತುಪ್ಪವನ್ನು ಬಳಸಿ , ಬಿಳಿ ಎಕ್ಕದ ಗಿಡದ ನಾರಿನಿಂದ ಅಥವಾ ತಾವರೆ ಹೂವಿನ ಕಾಂಡದ ನಾರಿನಿಂದ ಬತ್ತಿಯನ್ನು ಮಾಡಿ ಬೆಳ್ಳಿ ದೀಪವನ್ನು ಶುಕ್ರವಾರದ ಸಂಜೆ ಬೆಳಗಿದಲ್ಲಿ ಅವರ ದಾರಿದ್ರ್ಯ ನಿವಾರಣೆ ಹಾಗೂ ಸಾಲಭಾಧೆ ನಿವಾರಣೆಯಾಗುತ್ತದೆ.

* ಹುಣ್ಣಿಮೆ, ಅಮವಾಸ್ಯೆ ಅಥವಾ ಹಬ್ಬಗಳಂತಹಾ ಶುಭದಿನಗಳಲ್ಲಿ ತುಪ್ಪವನ್ನು ಬಳಸಿ, ಬೆಳ್ಳಿಯ ದೀಪವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹಚ್ಚುವುದರಿಂದ ಇಷ್ಟಾರ್ಥ ಕಾರ್ಯಗಳು ನೆರವೇರುತ್ತದೆ.

* ಬೆಳ್ಳಿಯ ದೀಪವನ್ನು ತುಪ್ಪ ಬಳಸಿ ಬೆಳಗಿಸಿ ಗಣಪತಿ ದೇವರಿಗೆ 21 ದಿನಗಳ ಕಾಲ ನಿರಂತರವಾಗಿ ಹಚ್ಚಿದರೆ ಆರೋಗ್ಯ ವೃದ್ಧಿ, ಉದ್ಯೋಗ ಪ್ರಾಪ್ತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ.

* ಶ್ರೀ ಮಹಾಲಕ್ಷ್ಮೀ ಅಥವಾ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ಒಟ್ಟು 51 ವಾರಗಳವರೆಗೆ ಹಚ್ಚಿದರೆ ಅವಿವಾಹಿತರಿಗೆ ಕಂಕಣಭಾಗ್ಯ, ಹಣಕಾಸಿನಲ್ಲಿ ಅಭಿವೃದ್ಧಿ ಉಂಟಾಗುತ್ತದೆ.

* ಯಾರು ಹಣಕಾಸಿನ ತೊಂದರೆ, ಸಾಲಭಾಧೆಯಿಂದ ಬಳಲುತ್ತಿರುವರೋ ಅವರು ಮಹಾಲಕ್ಷ್ಮಿಯ ಮುಂದೆ ಬೆಳ್ಳಿ ದೀಪದಲ್ಲಿ ಕೊಬ್ಬರಿ ಎಣ್ಣೆ ಹಾಕಿ ಬಿಳಿ ಎಕ್ಕದ ಗಿಡದ ಹತ್ತಿಯಿಂದ ಬತ್ತಿ ತಯಾರಿಸಿ, ನಾಲ್ಕು ಎಳೆಯ ಒಂದು ಬತ್ತಿಯನ್ನು ಮಾಡಿ ಹಚ್ಚುವುದರಿಂದ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ.

* ಶ್ರೀ ರಾಘವೇಂದ್ರ ಸ್ವಾಮಿ ಅಥವಾ ಶ್ರೀ ಸಾಯಿಬಾಬಾರ ಮುಂದೆ ಗುರುವಾರಗಳಂದು ಬೆಳ್ಳಿಯ ದೀಪದಲ್ಲಿ ತುಪ್ಪವನ್ನು ಹಾಕಿ ಹಚ್ಚುವುದರಿಂದ ಯಾವುದೇ ರೀತಿಯ ಮಾಟ ಮಂತ್ರಗಳ ಸಮಸ್ಯೆಯಿಂದ ಪಾರಾಗಬಹುದು ಮತ್ತು ಸಂತಾನ ಪ್ರಾಪ್ತಿಗಿದ್ದ ತೊಂದರೆಗಳು ದೂರವಾಗುವುವು.

ಈ ಬೆಳ್ಳಿಯ ದೀಪಕ್ಕೂ ಮನುಷ್ಯನ ಮೇಲೆ ಪ್ರಭಾವ ಬೀರೋ ನವಗ್ರಹಗಳಿಗೂ ಸಂಭಂಧವಿದೆ. ಅವುಗಳ ಬಗ್ಗೆ ಇನ್ನೊಮ್ಮೆ ನೋಡೋಣ…
ಮೇಲೆ ಹೇಳಿದ ಎಲ್ಲಾ ವಿಷಯಗಳು ಪುಸ್ತಕದಲ್ಲಿದ್ದುದನ್ನೆ ನಿಮ್ಮ ಮುಂದಿಟ್ಟದ್ದು… ಹಾಗಾಗಿ ಇದು ನಿಜವಾ …ಅನ್ನೊರ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ … ನಂಬಿಕೆ ಉಳ್ಳವರು ಓದಿದರೆ ಸಾಕು…ಇದರ ಫಲಪ್ರಾಪ್ತಿಗಳೆಲ್ಲವೂ ನಿಮ್ಮ ಶ್ರದ್ಧಾ ಭಕ್ತಿಗಳನ್ನೂ ಕೂಡ ಅವಲಂಬಿಸಿರುತ್ತದೆ ಅನ್ನೋದು ನನ್ನ ಅನಿಸಿಕೆ…

—ಕೆ.ಗುರುಪ್ರಸಾದ್

ಗ್ರಂಥ ಕೃಪೆ: ದೀಪ ಸಂಪುಟ
ಲೇಖಕರು : ಶ್ರೀಕಾಂತ್ ವಿ ಬಲ್ಲಾಳ್

ಭಾರತದರ್ಶನ -3

 

ಭಾರತವೆಂದರೆ,
ವಿದೇಶದಲ್ಲಿ ಧರ್ಮದ ಅಮೃತಧಾರೆ ಹರಿಸಿದ ಸ್ವಾಮಿ ವಿವೇಕಾನಂದ ತಾಯ್ನಾಡಿನಲ್ಲಿ ಇಳಿಯುತ್ತಿದ್ದಂತೆ ಮಣ್ಣಿನಲ್ಲಿ ಹೊರಳಾಡುತ್ತಾ ಆನಂದದ ತುತ್ತ ತುದಿಗೇರಿದರು. ಸ್ವರ್ಣಲಂಕೆಯ ವೈಭವದಿಂದ ವಿಚಲಿತಗೊಂಡ ಅನುಜ ಲಕ್ಷ್ಮಣನನ್ನು ಕಂಡ ಪ್ರಭು ಶ್ರೀರಾಮ “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದು ಕೊಂಡಾಡಿದ.

ನಾನೇ ಭಾರತ ಎಂದರು ರಮಣ ಮಹರ್ಷಿಗಳು. ಎನ್ನ ಪಾದಗಳೇ ಕನ್ಯಾಕುಮಾರಿ, ಹೃದಯವೇ ಇಂದ್ರಪ್ರಸ್ಥ(ದಿಲ್ಲಿ), ಶಿರವೇ ಕಾಶ್ಮೀರ, ಅಂಗಾಂಗಗಳು ಉಳಿದ ರಾಜ್ಯಗಳು, ಎಂದು ಅಡಿಯಿಂದ ಮುಡಿಯವರೆಗೆ ತಾಯಿ ಭಾರತಿಯನ್ನು ಆವಾಹನೆ ಮಾಡಿಬಿಟ್ಟರವರು.(ಅಣ್ಣ ಚಕ್ರವರ್ತಿ ಸೂಲಿಬೆಲೆ ಹೇಳುತ್ತಿರುತ್ತಾರೆ…ದಿಲ್ಲಿ ಎಂದರೆ ದಿಲ್ ಕಣ್ರೀ. ಅಲ್ಲಿ ಅಟ್ಯಾಕ್ ಆದರೆ ಹಾರ್ಟ್ ಅಟ್ಯಾಕ್ ಆದಂತೆ. ಮಂಡಿನೋವು ಅಂತ ಯಾರಾದರೂ ಅಂದರೆ ಕರ್ನಾಟಕಕ್ಕೇನೋ ಗ್ರಹಚಾರ ಕಾದಿದೆ ಅಂತ.)(ನಾವು ಕಾಶ್ಮೀರದರ್ಧ ಕಳೆದುಕೊಂಡಿದ್ದೇವೆ.ಅದಕ್ಕೆ ನಮ್ಮ ಬುಧ್ಧಿ ಬರಿದಾಗಿದೆ. ನಮ್ಮ ದೇಶಧ ಬಗ್ಗೆ ಏನೂ ಗೊತ್ತಿಲ್ಲ.)

“ಅಮ್ಮಾ ನಿನ್ನ ಸೇವೆಯೆಂದರೆ ಪ್ರಭು ಶ್ರೀರಾಮನ ಸೇವೆ. ನಿನ್ನಂತಹ ದೊಡ್ಡ ತಾಯಿಗೆ ನನ್ನಂತಹ ದಡ್ಡ ಮಗ ರಕ್ತವನ್ನಲ್ಲದೆ ಬೇರೇನನ್ನು ಕೊಡಲು ಸಾಧ್ಯ” ಎಂದು ರುಧಿರ ತರ್ಪಣ ಮಾಡಿದ ಧಿಂಗ್ರಾ. “ಅಮ್ಮ ನಿನಗಾಗಿ ನನ್ನ ಬರವಣಿಗೆಯನ್ನು ಮೀಸಲಿರಿಸಿದೆ. ನನ್ನ ಕಾವ್ಯಕ್ಕೆ ನೀನೆ ಪ್ರೇರಣೆಯಾದೆ. ನಿನ್ನ ಸೇವೆಯೆಂದರೆ ಅದು ದೇವದೇವತೆಗಳನ್ನು ಪ್ರಸನ್ನಗೊಳಿಸುವ ಕಾರ್ಯ.” ಎಂದು ತನ್ನ ಕಾವ್ಯರಸಧಾರೆಯಿಂದ ತಾಯಿಯ ಅಭಿಷೇಕ ಮಾಡಿ ಕ್ರಾಂತಿಯಜ್ಞದ ನೇತಾರನಾಗಿ ತನ್ನನ್ನೂ ತನ್ನೆಲ್ಲ ಬಂಧು ಬಳಗವನ್ನು ಕ್ರಾಂತಿ ಯಜ್ಞಕ್ಕೆ ತಳ್ಳಿದರು ವೀರ ಸಾವರ್ಕರ್. ಅವರ ಮಾತು ಕೇಳಿ “ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ।
ಪಿತೃಭೂಪುಣ್ಯಭೂಶ್ಚೈವ ಸವೈ ಹಿಂದೂ ರಿತಿಸ್ಮೃತಃ”- ಯಾವನು ಸಿಂಧುವಿಂದ ಸುತ್ತುವರಿದ ಭವ್ಯ ಭಾರತವನ್ನು ತನ್ನ ಕರ್ಮಭೂಮಿ ಯಾ ಪಿತೃ ಯಾ ಮಾತೃಭೂಮಿಯಾಗಿ ಪರಿಗಣಿಸುತ್ತಾನೋ ಆತ ಎಲ್ಲೇ ಇರಲಿ ಆತ ಹಿಂದೂ!
-ಮುಂದುವರಿಯುವುದು
-ರಾಜೇಶ್ ರಾವ್

 

 

 

 

ತಮಸೋಮ ಜ್ಯೋತಿರ್ಗಮಯ – ಭಾಗ 2

ಶ್ಲೋಕಗಳು ಹಿಂದೂ ಧರ್ಮದಲ್ಲಿನ ಒಂದು ಅವಿಭಾಜ್ಯ ಅಂಗ , ಮಾಡುವ ಪ್ರತಿಯೊಂದು ಕಾರ್ಯವನ್ನೂ ಶ್ಲೋಕದ ಮೂಲಕವೇ ಆರಂಭ ಮಾಡುತ್ತೇವೆ . ಅದೇ ರೀತಿ ದೇವರಿಗೆ ದೀಪ ಹಚ್ಚುವಾಗಲೂ ಶ್ಲೋಕ ಹೇಳುವ ಪರಿಪಾಠ ಇದೆ… ಅದು ಈರೀತಿ ಇದೆ…

ಭೋ ದೀಪ ಬ್ರಹ್ಮರೂಪಸ್ತ್ವಂ ಅಂಧಕಾರ ನಿವಾರಕ |
ಇಮಾಂ ಮಯಾಕೃತಾಂ ಪೂಜಾ ಗ್ರಹಾಣತ್ವಂ ಪ್ರವರ್ಧನ ||

ದೀಪಗಳ ಕುರಿತಾಗಿ ಇರುವ ಒಂದೆರಡು ಶ್ಲೋಕಗಳನ್ನ ನೋಡೋಣ…

ದೀಪಜ್ಯೋತಿಃ ಪರಬ್ರಹ್ಮ ದೀಪ ಜ್ಯೊತಿ ಜನಾರ್ಧನಃ |
ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ ||

ಅರ್ಥಾತ್ ಪರಬ್ರಹ್ಮ , ಜನಾರ್ಧನ ಸ್ವರೂಪವಾದ ದೀಪವು ಪಾಪನಾಶಿನಿಯೂ ಆಗಿದೆ… ಧಾರ್ಮಿಕ ರೀತಿಯಲ್ಲಿ ದೀಪಕ್ಕಿರುವ ಮಹತ್ವವನ್ನು ಈ ಶ್ಲೋಕ ಹೇಳುತ್ತದೆ… ಅಂದರೆ ದೀಪದ ಮಹತ್ವವನ್ನು ಅರಿತು ದೀಪ ಬೆಳಗಿದಾಗ ಅದು ಕತ್ತಲನ್ನು ನಾಶ ಮಾಡಿದಂತೆ ನಮ್ಮ ಪಾಪವನ್ನೂ ನಾಶ ಮಾಡುತ್ತದೆ. ಇದೇ ರೀತಿ ಇನ್ನೊಂದು ಶ್ಲೋಕ ದೀಪದಲ್ಲಿ ತ್ರಿಮೂರ್ತಿಗಳು ವಾಸವಾಗಿದ್ದಾರೆ ಅನ್ನುತ್ತದೆ ಅದು ಈ ರೀತಿ ಇದೆ…

ದೀಪ ಮೂಲೇ ಸ್ಥಿತೋ ಬ್ರಹ್ಮಾ ದೀಪ ಮಧ್ಯೇ ಜನಾರ್ಧನಃ |
ದೀಪಾಗ್ರೇ ಶಂಕರಃ ಪ್ರೋಕ್ತಃ ಸಂಧ್ಯಾದೀಪ ನಮೋಸ್ತುತೇ ||

ಇಂತಹಾ ಮಹತ್ವದ ಸ್ಥಾನದಲ್ಲಿರುವ ದೀಪದ ಬಗೆಗೆ ನಮಗಿರೋ ಮಾಹಿತಿ ಎಷ್ಟು ಕಡಿಮೆ ಅನ್ನಿಸುತ್ತೆ ಅಲ್ವಾ…

ದೀಪಗಳನ್ನು ಹಲವಾರು ರೀತಿಯಲ್ಲಿ ವಿಂಗಡಿಸಬಹುದು , ಯಾವ ಲೋಹದಿಂದ ಮಾಡಲ್ಪಟ್ಟಿದೆಯೋ ಅದರ ಅಧಾರದಿಂದ ಅಥವಾ ಯಾವ ದ್ರವ್ಯವನ್ನು ಉಪಯೋಗಿಸಿ ಉರಿಸುತ್ತಾರೋ ಅದರ ಆಧಾರದಿಂದಲೂ ಹಲವು ರೀತಿ ವಿಂಗಡಿಸಬಹುದು..ಲೋಹದ ಅಧಾರದಲ್ಲಿನ ದೀಪಗಳ ಕುರಿತಾಗಿ ವಿಂಗಡನೆ ಮಾಡಿದರೆ ಚಿನ್ನದ ದೀಪವನ್ನು ಕಾಣಬಹುದು ಬೆಳ್ಳಿಯ ದೀಪವನ್ನು ಕಾಣಬಹುದು, ಹಿತ್ತಾಳೆ, ತಾಮ್ರ ಇವುಗಳ ದೀಪವನ್ನೂ ಕಾಣಬಹುದು… ಅಷ್ಟೇ ಏಕೆ ಇತ್ತೀಚೆಗೆ ಸ್ಟೈನ್ ಲೆಸ್ ಸ್ಟೀಲ್ ನ ದೀಪಗಳೂ ಸಿಗುತ್ತವೆ. ಹಾಗಾದರೆ ಯಾವ ದೀಪಕ್ಕೆ ಏನು ಮಹತ್ವ ಇರಬಹುದಪ್ಪಾ ಅನ್ನೋ ಕುತೂಹಲ ಇದ್ರೆ ಮುಂದಿನ ಭಾಗದವರೆಗೂ ಕಾದಿರಿ…

—ಕೆ.ಗುರುಪ್ರಸಾದ್

ಗ್ರಂಥ ಕೃಪೆ : ದೀಪ ಸಂಪುಟ
ಮೂಲ ಲೇಖಕರು : ಶ್ರೀಕಾಂತ್ ವಿ ಬಲ್ಲಾಳ್

ಭಾರತ ದರ್ಶನ – 2

ರಾಷ್ಟ್ರ ಎಂದರೆ ಭೂಮಿಯ ಒಂದು ತುಂಡಾಗಲಿ, ಜನತೆಯ ಒಂದು ಗುಂಪಾಗಲಿ ಅಲ್ಲ. ಅದೊಂದು ಸಜೀವ ಸೃಷ್ಟಿ. ಒಂದೇ ಪರಂಪರೆ, ಇತಿಹಾಸ, ಒಂದೇ ಬಗೆಯ ಆಸೆ ಆಕಾಂಕ್ಷೆಗಳು, ಸುಖ ದುಃಖಗಳು, ಒಂದೇ ಶತ್ರು ಮಿತ್ರ ಭಾವನೆ ಹೊಂದಿ, ಒಂದು ನಿರ್ದಿಷ್ಟ ನೈಸರ್ಗಿಕ ಮೇರೆಗಳನ್ನುಳ್ಳ ಭೂಭಾಗದಲ್ಲಿ ಮಕ್ಕಳಂತೆ ಬೆಳೆದು ಬರುವ ಜನಾಂಗವೇ ಒಂದು ರಾಷ್ಟ್ರ. ವರ್ತಮಾನ ಕಾಲದ ಕೇವಲ ಉದ್ದಗಲಗಳ ಗುಣಾಕಾರಕ್ಕೆ ರಾಷ್ಟ್ರ ಒಳಪಡುವುದಿಲ್ಲ. ಭೂತದ ಇತಿಹಾಸ, ಪರಂಪರೆಗಳ ಆಳ ಅದಕ್ಕಿರುತ್ತದೆ. ಮಾನವ ಜೀವನ ವ್ಯವಸ್ಥೆಯ ಅನ…
ೇಕ ಪ್ರಯೋಗಗಳ ಪರಿಪಾಕವಾಗಿ ಶ್ರೇಷ್ಠ ಸಾಂಸ್ಕೃತಿಕ ಸಂಪತ್ತು, ಆದರ್ಶ ಜೀವನ ಪದ್ದತಿಯನ್ನು ನಮ್ಮ ಪೂರ್ವಜರು ಬಹು ಮೊದಲೇ ನಿರ್ಮಿಸಿದರು. ತಮ್ಮ ದೇಶವನ್ನು ತಾಯಿ ಎಂದು ಕರೆದು ತಮ್ಮೆಲ್ಲಾ ಶೃದ್ಧಾಭಕ್ತಿಗಳನ್ನು ಆಕೆಯ ಪದತಲದಲ್ಲಿ ಅರ್ಪಿಸಿದರು.

ವಾಸ್ತವಿಕವಾಗಿ ಭಾರತ ಎಂಬ ಹೆಸರೇ ಇದು ನಮ್ಮ ತಾಯಿ ಎಂದು ಸೂಚಿಸುತ್ತದೆ. ಇದನ್ನು ಅಜನಾಭವರ್ಷ ಎಂದರು. ಅಂದರೆ ಅಜನ್ಮನ(ವಿಷ್ಣು) ನಾಭಿ ಕಮಲದ ಮೇಲೆ ಇದು ನಿಂತಿದೆ ಎಂದರ್ಥ(ಮದ್ಭಾಗವತ). ವಾಯು ಪುರಾಣದಲ್ಲಿ ಹೈಮವತವರ್ಷ ಎಂದರು. ಭರತ ಚಕ್ರವರ್ತಿಯಿಂದಾಗಿ ಭಾರತ ಎನಿಸಿತು. ಸ್ವಾಯಂಭುವ ಮನುವಿನ ಮಗ ಪ್ರಿಯವ್ರತ. ಆತನ ಮಗ ನಾಭಿ. ನಾಭಿಯ ಸುತ ಋಷಭ. ಇವನ ಜೇಷ್ಠ ಪುತ್ರನೇ ಭರತ. ಇದು ವಾಯುಪುರಾಣ, ಭಾಗವತ, ಮಾರ್ಕಂಡೇಯ ಪುರಾಣಗಳಿಂದ ಧೃಢಪಟ್ಟಿದೆ. ಆದರೆ ದುಶ್ಯಂತ ಶಕುಂತಲೆಯರ ಪುತ್ರ ಭರತನಿಂದಾಗಿ ಭಾರತವೆನಿಸಿತೆಂದು ಮಹಾಭಾರತದಲ್ಲಿದೆ. ಈತ ಚತುರ್ ದಿಕ್ಕುಗಳನ್ನು ಗೆದ್ದು ನೂರಕ್ಕೂ ಹೆಚ್ಚು ಅಶ್ವಮೇಧ ಯಾಗ ಮಾಡಿಸಿದನೆಂದು ಐತರೇಯ ಬ್ರಾಹ್ಮಣ ಹೇಳುತ್ತದೆ. ಇವುಗಳ ಪೈಕಿ 78ನ್ನು ಯಮುನೆಯ ತಟದಲ್ಲೂ, 55ನ್ನು ಗಂಗಾ ತೀರದಲ್ಲೂ ನಡೆಸಿದ್ದ ದಾಖಲೆ ಶತಪಥ ಬ್ರಾಹ್ಮಣದಲ್ಲಿದೆ.

ಭೃ ಎನ್ನುವ ಧಾತುವಿನಿಂದ ಭಾರತ ಹುಟ್ಟಿಕೊಂಡಿತು. ಅಂದರೆ ಪೋಷಿಸು, ಭರಿಸು ಎಂದರ್ಥ. ಇದಕ್ಕೆ ಬೆಳಕು, ಜ್ಞಾನ, ಭಗವಂತ ಎಂಬೀ ಅರ್ಥಗಳಿವೆ. ಆದ್ದರಿಂದ ವಿಶ್ವವನ್ನೇ ಪೋಷಿಸಿದ, ವಿಶ್ವಕ್ಕೆ ಬೆಳಕು ನೀಡಿದ, ಜ್ಞಾನ ನೀಡಿದ, ಭಗವಂತನ ನಾಡು ಭಾರತ! ‘ಭಾರತ’ ಇದು ಪ್ರಗತಿಯ ಚಿಹ್ನೆ. ನಾಟ್ಯಶಾಸ್ತ್ರದ ಹರಿಕಾರ ಭರತಮುನಿಯ ಬೀಡು. ನಟರಾಜನ ಪದತಲ ಸೋಂಕಿದ ಪುಣ್ಯನೆಲ. ‘ಭಾ’ವ, ‘ರಾ’ಗ, ‘ತಾ’ಳಗಳ ಸಾಮರಸ್ಯದ ಭೂಮಿ! ಇದೇ ಇಲ್ಲಿನ ವಿವಿಧತೆಯಲ್ಲೂ ಏಕನಾದ ಹೊರಡಿಸಿಹುದು!
॥ವಂದೇ ಮಾತರಂ॥
-ಮುಂದುವರೆಯುವುದು
-ರಾಜೇಶ್ ರಾವ್

ಆಚರಣೆಯಲ್ಲೂ ಜಾತ್ಯಾತೀತತೆಯ ಹುಚ್ಚು

ಹಾಗೇ ಕುಳಿತು ಹಳೆಯ ಪೇಪರ್ ಗಳನೆಲ್ಲ ಸರಿ ಮಾಡಿ ಅಟ್ಟಕ್ಕೆ ಹಾಕ್ತ ಇದ್ದಾಗ ಒಂದು ವಾರದ ಹಿಂದಿನ ಉದಯವಾಣಿಯಲ್ಲೊಂದು ಲೇಖನದ ಹೆಡ್ಡಿಂಗ್ ನನ್ನ ಗಮನ ಸೆಳೆಯಿತು…” ಹುಸಿ ಜಾತಿವಾದ, ಹಸಿ ಧಾರ್ಮಿಕತೆ ” ಇದು ಟೈಟಲ್ಲು.. ನೋಡಿದರೆ ಅದು ವಿ.ಐ.ಪಿ ಕಾಲಂ… ಲೇಖನ ಬರೆದವರು ” ರಾಹುಲ್ ಬೋಸ್ ” ನಟ, ಸಾಮಾಜಿಕ ಕಾರ್ಯಕರ್ತ ( ಈ ನಟ ಅನ್ನೋದೇನೋ ಗೊತ್ತಾಯ್ತು ಸಾಮಾಜಿಕ ಕಾರ್ಯಕರ್ತ ಹೇಗೋ ಇನ್ನು ಗೊತ್ತಗ್ತಾ ಇಲ್ಲ.. ಅವರ ಸಿನಿಮಾಗಳಂತೆ ಸಂಖ್ಯೆಯಲ್ಲಿ ಇದು ಬಹಳ ಕಡಿಮೆಯೇನೋ…) ಅವರ ಲೇಖನದ ಮುಖ್ಯ ವಸ್ತು ಭಾರತದಲ್ಲಿನ ಕೆಲವು ಆಚರಣೆಗಳು… ತಮ್ಮ ಲೇಖನದಲ್ಲಿ ಅವರು ಇಲ್ಲಿನ ಕೆಲವು ಆಚರಣೆಯ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತಾರೆ.. ಾಅರತಿ ಎತ್ತಿ , ತಿಲಕ ಇಟ್ಟು ಅತಿಥಿಗಳನ್ನು ಸ್ವಾಗತಿಸುವುದು, ದೀಪ ಬೆಳಗಿ ಕಾರ್ಯಕ್ರಮದ ಶುಭಾರಂಭ ಮಾಡುವುದು ತೆಂಗಿನಕಾಯಿ ಒಡೆದು ಮುಹೂರ್ತ ನೆರವೇರಿಸುವುದು… ಕರ್ವಾ ಚೌತ್ ಆಚರಣೆಯನ್ನು ಜಾಹೀರಾತುಗಳಲ್ಲಿ ತೋರಿಸುವುದು… ಈ ತರ ಇದೆಲ್ಲಾ ಹುಸಿ ಜಾತೀಯತೆ ಅಂತೆ… ಭಾರತದಲ್ಲಿ ಜಾತ್ಯಾತೀತತೆ ಇಲ್ಲ ಇವೆಲ್ಲಾ ಹಿಂದೂ ಸಂಪ್ರದಾಯಗಳು ಇವನ್ನೆಲ್ಲಾ ಸರಕಾರಿ ಕಾರ್ಯಕ್ರಮದಲ್ಲಿ ಯಾಕೆ ಮಾಡುತ್ತಾರೆ ಅನ್ನೋದು ಅವರ ಆತಂಕ…ಹಿಂದೂ ಆಚರಣೆಗಳನ್ನೆ ಮುಖ್ಯವಾಗಿ ಬಳಸಿಕೊಳ್ಳುವ ಜಾಹೀರಾತುಗಳಿಂದ ೧೫ ಕೋಟಿ ಜನ ಪ್ರತಿದಿನ ಒಲ್ಲದ ಮನಸ್ಸಿನಿಂದ ಇವನ್ನೆಲ್ಲ ನೋಡುತ್ತಾರಂತೆ…

ಇವರ ಈ ಸಾಲುಗಳನ್ನು ಓದುತ್ತಾ ಹೋದಂತೆ ಮನಸ್ಸಿಗೇನೋ ಹಿಂಸೆ ಆಗತೊಡಗಿತು… ಜಾತ್ಯಾತೀತತೆಯ ಪಾಠ ಹೇಳಿಕೊಡುತ್ತಾ ಭಾರತೀಯತೆಯನ್ನು ಹಾಳುಮಾಡುತ್ತಿದ್ದಾರಲ್ಲ ಎಂದೆನಿಸಿತು… ಭಾರತ ಈಗ ಜಾತ್ಯಾತೀತ ರಾಷ್ಟ್ರ ಒಪ್ಪೋಣ .. ಆದರೆ ಈ ಆಚರಣೆಗಳೆಲ್ಲಾ ಅನಾದಿ ಕಾಲದಿಂದಲೂ ಭಾರತಕ್ಕೊಂದು ತನ್ನದೇ ಆದ ಮಹತ್ವವನ್ನು ಕೊಟ್ಟಿದೆ ಅದೆಷ್ಟೋ ಜನ ವಿದೇಶಿಯರು ಭಾರತಕ್ಕೆ ಬಂದೊಡನೆ ಹಣೆಯ ಮೇಲೆ ಹರಡಿಕೊಂಡಿರುವ Continue reading →

ಶ್ರೀ ಕೃಷ್ಣ ಜನ್ಮಾಷ್ಟಮಿ

ಚಾಂದ್ರಮಾನ ಪಂಚಾಗ ರೀತ್ಯಾ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು. ಸೌರಮಾನ ಪಂಚಾಗ ರೀತ್ಯಾ ಸಿಂಹಮಾಸದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು. ಇದಲ್ಲದೇ ವರಾಹ ಪುರಾಣದ ಪ್ರಕಾರ ಶ್ರೀ ಕೃಷ್ಣ ಜನ್ಮವು ಆಷಾಢ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಆಯಿತು. ಆ ಸಂದರ್ಭದಲ್ಲಿ ಚಾಂದ್ರಮಾನದ ಶ್ರಾವಣ ಮಾಸವೇ ಸೌರಮಾನದ ಸಿಂಹಮಾಸವಾಗಿತ್ತು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿಯೇ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದು ವಾಡಿಕೆ. ದೇಶದ ವಿವಿಧ ಪ್ರದೇಶಗಳಲ್ಲಿ ತಮ್ಮದೇ ವೈಖರಿಯಲ್ಲಿ ಶ್ರೀಕೃಷ್ಣನನ್ನು ಆರಾಧಿಸುವರು, ಪೂಜಿಸುವರು. ಇದೇ ದಿನವನ್ನು ಗೋಕುಲಾಷ್ಟಮಿಯೆಂದೂ, ಶ್ರೀ ಕೃಷ್ಣ ಜಯಂತಿಯೆಂದೂ, ಜನ್ಮಾಷ್ಟಮಿಯೆಂದೂ ಕರೆಯುವರು. ವರಾಹ ಪುರಾಣದಲ್ಲಿ ಉಲ್ಲೇಖಿಸಿದಂತೆ, ಅಂದು ರಾತ್ರಿ ಸ್ತ್ರೀಯು ಪತಿಯೊಡನೆ ಉಪವಾಸವಿದ್ದು ವ್ರತವನ್ನಾಚರಿಸಿದರೆ ಅವಳ ಹೃದಯದಲ್ಲಿ ಭಗವಂತನು ಕಾಣಿಸಿಕೊಳ್ಳುವನು. ಅಂತಹವರಿಗೆ ಒಳ್ಳೆಯ ಸಂತಾನ ಮತ್ತು ಸಂಪತ್ತು ದೊರೆಯುತ್ತದೆ ಎಂದು ಹೇಳಿದೆ. ‘ತಿಥಿತತ್ವ’ ಎಂಬ ಗ್ರಂಥದಲ್ಲಿ ಜಯಂತಿಯ ಆಚರಣೆಯ ಬಗ್ಗೆ ಹೀಗೆ ಹೇಳಿದೆ – “ಜಯಂತಿ ಯೋಗವು ಒಂದು ದಿವನ ಮಾತ್ರವಿದ್ದರೆ ಅಂದೇ ಉಪವಾಸ ಪೂಜೆಯನ್ನು ಮಾಡಬೇಕು. ಆ ಯೋಗವು ಎರಡು ದಿವಸ ಇದ್ದರೆ, ಎರಡನೆಯ ದಿನದಲ್ಲಿ ವ್ರತದ ಆಚರಣೆ ಮಾಡಬೇಕು. ಜಯಂತಿ ಯೋಗವು ಇಲ್ಲದಿದ್ದರೆ ರೋಹಿಣಿ ನಕ್ಷತ್ರದಿಂದ ಕೂಡಿದ ಅಷ್ಟಮಿಯಂದು ವ್ರತವನ್ನಾಚರಿಸಬೇಕು. ಎರಡು ದಿನಗಳಲ್ಲೂ ರೋಹಿಣಿ ನಕ್ಷತ್ರಕ್ಕೆ ಸೇರಿದ ಅಷ್ಟಮಿಯಿದ್ದರೆ ಉಪವಾಸವನ್ನು ಎರಡನೆಯ ದಿನದಲ್ಲಿ ಆಚರಿಸಬೇಕು. ರೋಹಿಣಿ ನಕ್ಷತ್ರವು ಇಲ್ಲದಿದ್ದರೆ ಅರ್ಧರಾತ್ರಿಯಲ್ಲಿರುವ ಅಷ್ಟಮಿಯಲ್ಲಿ Continue reading →

ನ ವ ಅರೆ ಪತ್ಯುಹ್ ಕಮಾಯ ಪತಿಹ್ ಪ್ರಿಯೋ ಭವತಿ ,
ಅತ್ಮನಸ್ ತು ಕಮಾಯ ಪತಿಹ್ ಪ್ರಿಯೋ ಭವತಿ ;
ನ ವ ಅರೆ ಜಯಯಿ ಕಮಾಯ ಜಯ ಪ್ರಿಯ ಭವತಿ ;
ಅತ್ಮನಸ್ ತು ಕಮಾಯ ಜಯ ಪ್ರಿಯ ಭವತಿ ;
ನ ವ ಅರೆ ಸರ್ವಸ್ಯ ಕಮಾಯ ಸರ್ವಂ ಪ್ರಿಯಂ ಭವತಿ ;
ಅತ್ಮನಸ್ ತು ಕಮಾಯ ಸರ್ವಂ ಪ್ರಿಯಂ ಭವತಿ [ ಬ್ರಿಹದರನ್ಯಕ ಉಪನಿಷದ್ , ೨.೩ ]

ತಾತ್ಪರ್ಯ :
ಪತಿ ಪತ್ನಿಗೆ ಪ್ರೀತಿ ಕೊಡುವುದು ಪತ್ನಿಯಮೇಲೆ ಪ್ರೀತಿಯಿಂದ ಅಲ್ಲ
ಪತಿ ಪತ್ನಿಗೆ ಪ್ರೀತಿ ಕೊಡುವುದು ತನ್ನನು ತಾನು ಪ್ರೀತಿಸುವುದರಿಂದ
ಆದೆ ರೀತಿ
ಪತ್ನಿ ಪತಿಗೆ ಪ್ರೀತಿ ಕೊಡುವುದು ಪತಿಯಮೇಲೆ ಪ್ರೀತಿಯಿಂದ ಅಲ್ಲ
ಪತ್ನಿ ಪತಿಗೆ ಪ್ರೀತಿ ಕೊಡುವುದು ತನ್ನನು ತಾನು ಪ್ರೀತಿಸುವುದರಿಂದ
ಇ ಸಂಸಾರದ ಎಲ್ಲ ಭೋಗ ವಸ್ತುಗಳು ಜೀವಿಗಳನ್ನು ನಾವು ಪ್ರಿತಿಸುತ್ತೇವೆ
ಹಣವನ್ನು ನಾವು ಪ್ರೀತಿಸುವುದಿಲ್ಲ ಹಣದಿಂದ ಪಡೆಯುವ ಸುಖಃ ಭೋಗಗಳಿಗೆ ನಾವು ಹಣವನ್ನು ಪ್ರೀತಿಸುತ್ತೇವೆ
ಆದರೆ ಇವೆಲ್ಲವನ್ನೂ ಪ್ರಿತಿಸುವುದಕ್ಕೆ ಕಾರಣ ನಾವು ನಮ್ಮನ್ನು ತುಂಬಾ ಪ್ರೀತಿಸುತ್ತೇವೆ
ನಾವು ಯಾವುದಾದರು ವಸ್ತು ಅಥವ ಜೀವಿಯನ್ನು ಪ್ರಿತಿಸುತ್ತಿವ …..? ಅವರಿಂದ ನಮಗೆ ನೋವು ಕಷ್ಟ ಸಿಗುತ್ತೆ ಅಂತ ಗೊತ್ತಿದ್ದರೆ
ನಾವು ಎಲ್ಲ ವಸ್ತು ಎಲ್ಲ ಜೀವಿಯನ್ನು ಪ್ರಿತಿಸುತ್ತೇವೆ ಅದರಿಂದ ಅಥವ ಅವರಿಂದ ನಮಗೆ ಆನಂದ ಮತ್ತು ಸುಖಃ ಸಿಗುವುದರಿಂದ ಮಾತ್ರ
~ ವಿಶ್ವನಾಥ್ ಮಾವುಕೆರೆ ~  

ತ್ಯಾಗದ ಹಿರಿಮೆ

ಸಾಮಾನ್ಯವಾಗಿ ಒಂದು ಊರಿಗೆ ನಾಟಕ ಕಂಪೆನಿ, ಸರ್ಕಸ್ ತಂಡ, ಯಕ್ಷಗಾನ ಮೇಳ ಇತ್ಯಾದಿ ಮನೋರಂಜನೆ ನೀಡುವ ಸಾಂಸ್ಕೃತಿಕ ತಂಡಗಳು ಬಂದಾಗ ಬಡವರೂ, ಶ್ರೀಮಂತರೂ, ಮಧ್ಯಮ ವರ್ಗದವರೂ ಅಲ್ಲಿಗೆ ಹೋಗಿ ಮನೋರಂಜನೆ ಪಡೆಯುತ್ತಾರೆ. ಇದರಿಂದ ದೈನಂದಿನ ಚಟುವಟಿಕೆ, ದುಡಿತಗಳಿಂದ ಉಂಟಾದ ಆಯಾಸ ಪರಿಹಾರವಾಗುತ್ತದೆ, ಮತ್ತು ಇನ್ನಷ್ಟು ದುಡಿಯಲು ಉತ್ಸಾಹ-ಚೈತನ್ಯ, ಪ್ರೇರಣೆಗಳನ್ನು ಪಡೆಯುತ್ತಾರೆ.

ಅದೇ ರೀತಿಯಲ್ಲಿ ಊರಿಗೊಬ್ಬರು ಸಂತರು, ವಿದ್ವಾಂಸರು, ಮಹಾಪುರುಷರು ಆಗಮಿಸಿದಾಗ, ಅವರ ಭೇಟಿಗೆ ಯಾರು ಹೋಗಬೇಕು ? ಮತ್ತು ಹೋದವರಿಗೆ ಸಿಗಬಹುದಾದ ಪ್ರಯೋಜನಗಳಾದರೂ ಏನು ? ಎಂಬ ವಿಷಯದ ಬಗ್ಗೆ ಸ್ವಾರಸ್ಯಕರವಾದ ಒಂದು ಪ್ರಸಂಗ ಹೀಗಿದೆ:

ಎರಡೂವರೆ ಸಾವಿರ ವರ್ಷಗಳ ಹಿಂದೆ ಮಗಧ ದೇಶದಲ್ಲಿ ಕೂಟದತ್ತನೆಂಬ ಒಬ್ಬ ಬ್ರಾಹ್ಮಣನಿದ್ದನು. ಘನ ವಿದ್ವಾಂಸನಾಗಿದ್ದು, ತನ್ನ ಮಧುರ-ಸರಳ ವ್ಯವಹಾರ ವಿಧಾನಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದನು. ಒಮ್ಮೆ ಮಗಧ ದೇಶಕ್ಕೆ ಭಗವಾನ್ ಬುದ್ಧರ ಆಗಮನವಾದಾಗ, ಜನರು ಗುಂಪು-ಗುಂಪಾಗಿ ಆಕರ್ಷಿತರಾದರು ಮತ್ತು ಅವರ ದರ್ಶನಕ್ಕೆಂದು ಧಾವಿಸಿ ಬರತೊಡಗಿದರು. ಭಗವಾನ್ ಬುದ್ಧರಿಗೆ ವಂದಿಸಿ, ಆಶೀರ್ವಾದ ಪಡೆಯಲೆಂದು Continue reading →

ಕಳ್ಳನಿಗೂ ನೆರವು

ಸಾಮಾನ್ಯವಾಗಿ ‘ಕಳ್ಳ ಬರುತ್ತಾನೆ’- ಎಂದು ಗೊತ್ತಾದರೆ ಸಾಕು, ಎಲ್ಲರೂ ಹೆದರುತ್ತಾರೆ. ಎಲ್ಲರೂ ಕಳ್ಳನಿಂದ ತಮ್ಮ-ತಮ್ಮ ಅಮೂಲ್ಯ ವಸ್ತುಗಳನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಕಳ್ಳನಿಂದ ಅಪಾಯವಿದೆ ಎಂದು ತಿಳಿದೊಡನೆ ಜನರು ಪೊಲೀಸರನ್ನು ಕರೆಸುತ್ತಾರೆ. ಮನೆಗೆ ದೊಡ್ಡ ಬೀಗ ಹಾಕಿ ಭದ್ರತೆಯೊದಗಿಸುತ್ತಾರೆ. ಹೇಗಾದರೂ ಮಾಡಿ, ತಮ್ಮ ಮನೆ-ಸೊತ್ತು, ದುಡ್ಡು-ಬಂಗಾರ ಮೊದಲಾದುವನ್ನು ಕಾಪಾಡುವ ಪ್ರಯತ್ನದಲ್ಲಿ ಯಶಸ್ವಿಯಾಗಿ ಬಿಡುತ್ತಾರೆ.’ಕಳ್ಳತನ’ ಎಂಬುದೇನೋ ಅತೀವ ದುಷ್ಟ ಪಾಪ ಕೃತ್ಯ, ಇಂಥ ಪಾಪ ಮಾಡಿದವರು ಅದರ ಫಲವನ್ನು ಅನುಭವಿಸಲೇಬೇಕಾಗುತ್ತದೆ. ಎಲ್ಲ ಶಾಸ್ತ್ರ ಪುರಾಣಗಳೂಕಳ್ಳತನವನ್ನು ನಿಂದಿಸುತ್ತವೆ. ಆದರೆ ಸಂತ ಆಚಾರ್ಯ ರಜನೀಶ್ (ಓಶೋ) ಅವರು ಕಳ್ಳನ ಮಾನಸಿಕ ವಿಶ್ಲೇಷಣೆ ಮಾಡಿ, ಕಳ್ಳನ ಬಗ್ಗೆ ಸಹಾ ಸಹಾನುಭೂತಿ-ಅನುಕಂಪದ ಕರುಣಾಶ್ರು ಹರಿಸುವ ಪ್ರಯತ್ನ ಮಾಡಿರುವುದು ಹೃದಯಸ್ಪರ್ಶಿಯಾಗಿದೆ.’ರಿಝಾಯಿ’- ಎಂಬ ಹೆಸರಿನ ಒಬ್ಬ ಬಡ ಸನ್ಯಾಸಿಯಿದ್ದ. ಒಮ್ಮೆ ರಾತ್ರಿ ವೇಳೆ ತನ್ನ ಗುಡಿಸಲಲ್ಲಿ ಮಲಗಿದ್ದ. ಅಲ್ಲಿಗೊಬ್ಬ ಕಳ್ಳ ನುಗ್ಗಿದ. ಆದರೆ ಸನ್ಯಾಸಿಯ ಬಳಿ ಆತ ಹೊದ್ದುಕೊಂಡ ಕಂಬಳಿಯ ಹೊರತು ಬೇರೇನೂಇರಲಿಲ್ಲ, ಕಂಬಳಿ ಹೊದ್ದು ನೆಲದಲ್ಲಿ ಮಲಗಿದ್ದ ಆ ಸನ್ಯಾಸಿ ಚಿಂತೆಗೊಳಗಾದ- ‘ಛೆ !ಇಂಥ ಬಡಪಾಯಿ ಕಳ್ಳನೆಷ್ಟು ದೂರದಿಂದ ಬಂದಿರಬಹುದು ? ಎಂಥ ತಾಪತ್ರಯವೋ ? ನಾನೆಂತು ಇವನಿಗೆ ನೆರವಾಗಲಿ ?ನನ್ನಲ್ಲಿ ಕಂಬಳಿ ಬಿಟ್ಟರೆ ಬೇರೇನಿಲ್ಲ. ಏನು ಮಾಡಲಿ ?’ ಕಳ್ಳನಿಗೆ ಸನ್ಯಾಸಿ ಮಲಗಿದ್ದ ಹಾಗೆಯೇ ಕಂಬಳಿಯನ್ನು ಸೆಳೆಯುವಷ್ಟು ಸಾಹಸವಿರಲಿಲ್ಲ. ಅದಕ್ಕಾಗಿ ಸನ್ಯಾಸಿಯು ಕಂಬಳಿಯಿಂದಾಚೆಗೆ ಮಗ್ಗುಲು ಬದಲಾಯಿಸಿದ. ತಕ್ಷಣವೇ ಕಳ್ಳ ಕಂಬಳಿಯೊಂದಿಗೆ ಹೊರಗೋಡಿದ ಖುಷಿಯಿಂದ.

ಚಳಿ ಜೋರಾಗಿತ್ತು. ಆದರೆ ಕಳ್ಳನಿಗೆ ಸಂತಸ ನೀಡಿದ ಸಂತೃಪ್ತಿಯಿಂದ ಸನ್ಯಾಸಿಯ ಹೃದಯ Continue reading →

ಋಷಿ ಮುನಿ ಪೂಜಿತ

ಋಷಿ ಮುನಿ ಪೂಜಿತ ಸುಮನಸ ವಂದಿತ
ಸುಮನಯ ಪಾದ ಪದ್ಮ।
ಇನಕುಲ ಪಾಲಿತ ಶಶಿಕುಲ ಪೋಷಿತ
ಸಿರಿವರ ರಾಜಪದ್ಮ॥

ಸಾತ್ವಿಕ ಶಕ್ತಿ ತಾತ್ವಿಕ ಪ್ರೇರಣಾ
ಅಚ್ಚಳಿಯ ನಿಚ್ಚಳ ಪ್ರಭಾವ।
ಭಗವದ್ಗೀತ ಜೀವನ ಧರ್ಮ
ದುಷ್ಟ ಶಿಕ್ಷಣ ಶಿಷ್ಟ ರಕ್ಷಣ॥

ಹಿಂಗದ ದಾಹ ಇಂಗಿದ ತ್ಯಾಗ
ದಾಸ್ಯ ಶೃಂಖಲಾ ತನುಮನ ತಳಮಳ।
ಬಂಧಿತ ಮನಸು ಕುಂದಿತು ತಿನಿಸು
ಸಂಸ್ಕೃತಿ ಮರೆಸುವ ಷಡ್ಯಂತ್ರ ರೂಪಿತ॥

ಅರಿವಿನ ತೋರಣ ರುಧಿರದ ಸಿಂಚನ
ಸ್ವಾತಂತ್ರ್ಯದ ಪರಮಾನ್ನ।
ಮುಕುಲಿತ ನಯನ ವಿಕಸಿತ ವದನ
ಗರಿಗೆದರಿತು ಸ್ವಾಭಿಮಾನ॥

ಮರೆತಿರೆ ಸಂಸ್ಕೃತಿ ಅಳಿದಿದೆ ಸುಕೃತಿ
ಜಾತ್ಯಾತೀತತೆ ಸೋಗು ಜಾತಿಯ ಪೀಡೆ।
ಬೌದ್ಧಿಕ ದಾಸ್ಯ ಇತಿಹಾಸದ ಶೋಷಣೆ
ಗೃಹಬಂಧನ ಕಾರಣ ಉಳಿದಿದೆ ವೇದನೆ॥
-ರಾಜೇಶ್ ರಾವ್ 

ಸತ್ಯ ಧರ್ಮದ ಬೆಳಕನ್ನು ತೋರಿಸು

ಹಿರಣ್ಮಯೇನ ಪತ್ರೆನ
ಸತ್ಯಸ್ಯಪಿಹಿತಂ ಮುಖಂ
ತತ್ತ್ವಂ ಪುಸಂನ್ ಅಪವ್ರ್ನು
ಸತ್ಯ -ಧರ್ಮಯ ದ್ರಿಸ್ತೆಯೇ

ತಾತ್ಪರ್ಯ :
ಅಸ್ತಿತ್ವದ ಮತ್ತ ನಿಜ ಸತ್ಯದ ಒಂದು ಮುಖಃ ಚಿನ್ನದ ಪಾತ್ರೆಯಲ್ಲಿ ಮುಚ್ಚಿದೆ
ಓ ಸೂರ್ಯ ದೇವ ತೆರೆದು ಅದರ ಮುಚ್ಚಳ ತೋರಿಸು ನಮ್ಮ ಸತ್ಯ ಧರ್ಮಗಳ
ಓ ಬೆಳಕೇ ನೂರು ಸೂರ್ಯನ ನಿಯಂತ್ರಿಸುವ ಬೆಳಕಿನ ದೇವರೇ
ಉಜ್ವಲಿಸು ಪ್ರತಿ ಮನೆ ಮನಗಳಲ್ಲಿ ಜ್ಞಾನವಾಗಿ ನಮ್ಮ ಅರಿವಾಗಿ ಬಾ
ನಮ್ಮೊಳಗಿನ ಸತ್ಯ ಧರ್ಮದ ಬೆಳಕನ್ನು ತೋರಿಸು
~ ವಿಶ್ವನಾಥ ಮಾವುಕೆರೆ ~

ಭಗವದ್ಗೀತೆ 6,5

ಉದ್ಧರೆದ್ ಆತ್ಮನಾತ್ಮಾನಂ
ನಾತ್ಮಾನಂ ಅವಸಾದಯೇತ್
ಆತ್ಮೈವ ಹೈ ಆತ್ಮನೋ ಬಂಧುರ್
ಆತ್ಮೈವ ರಿಪುರ್ ಆತ್ಮನಃ [ ಭಗವತ್ ಗೀತೆ ೬,೫ ]

ವಿವೇಕ ಯುಕ್ತ ಮನದ ಸಹಾಯದಿಂದ ಸಂಸಾರದಲ್ಲಿ ಮುಳುಗಿರುವ ಆತ್ಮವನ್ನು ಉದ್ದಾರ ಮಾಡಿ
ಅದರೊಳಗೆ ನಿಮ್ಮನ್ನು ನೀವೇ ಮುಳುಗಿಸದಿರಿ , ಏಕೆಂದರೆ ನೀವೇ ನಿಮ್ಮ ಬಂಧು ಮತ್ತು ಶತ್ರು

ತಾತ್ಪರ್ಯ : 
ಆಸೆ, ಲೋಭ , ಮೋಹ, ಮದ, ಮಾತ್ಸರ್ಯ, ದ್ವೇಷ, ಆಹಂಕರ ಇವೆಲ್ಲ ಸುಖವನ್ನು ಪಡೆಯಲು ಬಳಸುವ ಅತಿ ತಿಕ್ಷಣ ಶಾಸ್ತ್ರಗಳು ಇವುಗಳಲ್ಲಿ ನಿಮ್ಮನ್ನು ನೀವು ಮುಳುಗಿಸದೆ ಆದರ ಉದ್ದಾರ ಮಾಡಿ
ಏಕೆಂದರೆ ಇವನ್ನು ಬಳಸಲು ನಿಮಗೆ ನೀವೇ ಶತ್ರು ಇದರಿಂದ ಹೊರಗೆ ಬಂದು ಉದ್ದಾರ ಮಾಡಲು ನಿಮಗೆ ನೀವೇ ಬಂಧು

– ವಿಶ್ವನಾಥ್ ಮಾವುಕೆರೆ